ಯುಗಾದಿ ಹಬ್ಬಕ್ಕೆ ಬೆಲೆ ಏರಿಕೆಯ ಶಾಕ್: ಹೂ, ಹಣ್ಣು, ತರಕಾರಿ ಭಲೇ ದುಬಾರಿ
ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಯುಗಾದಿ ಹಬ್ಬ ಅಂದರೆ ಖುಷಿ ಇಮ್ಮುಡಿಯಾಗುತ್ತೆ. ಆದರೆ ಯುಗಾದಿಗಾಗಿ ಹಬ್ಬಕ್ಕೆ ಬೇಕಾಗುವ ಪದಾರ್ಥಗಳ ದರ ಗಗನಕ್ಕೇರಿದೆ. ಹೂವು-ಹಣ್ಣು ದರ ಕೇಳಿದರೆ ಹಬ್ಬವೇ ಬೇಡ ಎನ್ನುವ ಮಟ್ಟದಲ್ಲಿನ ಬೆಲೆ ಏರಿದೆ. ಅದ್ರಲ್ಲೂ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಹೂವಿನ ದರ ಕೆಜಿಗೆ 500 ದಾಟಿದೆ. ಇನ್ನು ಹೋಳಿಗೆ ಹಾಗು ಎಡೆಗೆ ಬಳಸುವಂತಹ ಪದಾರ್ಥಗಳಾದ ಬೆಲ್ಲ ಕೆಜಿಗೆ 65 ರೂಪಾಯಿ, ಬೇವಿನ ಕಟ್ಟು 10 ರೂಪಾಯಿ ಆಗಿದೆ.
ಬೆಂಗಳೂರು(ಮಾ.29): ಹಬ್ಬ ಅಂದ್ರೆ ಸಾಕು, ಎಲ್ಲಾ ಕಡೆ ಸಂಭ್ರಮವೋ ಸಂಭ್ರಮ. ಅದರಲ್ಲೂ ಯುಗಾದಿ ಹಬ್ಬ ಅಂದರೆ ಖುಷಿ ಇಮ್ಮುಡಿಯಾಗುತ್ತೆ. ಆದರೆ ಯುಗಾದಿಗಾಗಿ ಹಬ್ಬಕ್ಕೆ ಬೇಕಾಗುವ ಪದಾರ್ಥಗಳ ದರ ಗಗನಕ್ಕೇರಿದೆ. ಹೂವು-ಹಣ್ಣು ದರ ಕೇಳಿದರೆ ಹಬ್ಬವೇ ಬೇಡ ಎನ್ನುವ ಮಟ್ಟದಲ್ಲಿನ ಬೆಲೆ ಏರಿದೆ. ಅದ್ರಲ್ಲೂ ಮಲ್ಲಿಗೆ, ಕನಕಾಂಬರ, ಸೇವಂತಿಗೆ ಹೂವಿನ ದರ ಕೆಜಿಗೆ 500 ದಾಟಿದೆ. ಇನ್ನು ಹೋಳಿಗೆ ಹಾಗು ಎಡೆಗೆ ಬಳಸುವಂತಹ ಪದಾರ್ಥಗಳಾದ ಬೆಲ್ಲ ಕೆಜಿಗೆ 65 ರೂಪಾಯಿ, ಬೇವಿನ ಕಟ್ಟು 10 ರೂಪಾಯಿ ಆಗಿದೆ.
ಹಿಂದೆ ಮಾರುಕಟ್ಟೆಯಲ್ಲಿ ಬೀನ್ಸ್ ಕೆಜಿಗೆ 64 ರೂಪಾಯಿ ಇತ್ತು. ಸದ್ಯದ ಬೆಲೆ 52ರೂಪಾಯಿ. ಬದನೆಕಾಯಿ ಹಿಂದೆ 30 ಇದ್ದಿದ್ದು ಇವತ್ತು 45 ರೂಪಾಯಿ ಆಗಿದೆ. ಅದೇ ರೀತಿ, ಕ್ಯಾಪ್ಸಿಕಂ 40 ರಿಂದ 60 ರೂಪಾಯಿ ಆದರೆ. ಕ್ಯಾರೆಟ್ 32 ರಿಂದ 43 ರೂಪಾಯಿಗೆ ಏರಿದೆ. ಅಲ್ದೆ, 20 ಇದ್ದ ಟೊಮ್ಯಾಟೋ ಇವತ್ತು 30 ರೂಪಾಯಿಗೆ ಸೇಲ್ ಆಗುತ್ತಿದೆ.
ಬೆಲೆ ೇರಿದರೂ ಜನರು ಮಾರುಕಟ್ಟೆಗೆ ಬಂದು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದಾರೆ. ಒಟ್ಟಿನಲ್ಲಿ ನಾಳಿನ ಹೊಸ ವರ್ಷದ ಮೊದಲ ಹಬ್ಬವನ್ನ ಸ್ವಾಗತಿಸಲು ಸಿಲಿಕಾನ್ ಸಿಟಿ ಮಂದಿ ಭರ್ಜರಿಯಾಗಿ ರೆಡಿಯಾಗಿ