ರಾಜಕೀಯ ಸಂಚು ದೆಹಲಿಯಿಂದ ಬೆಂಗಳೂರಿಗೆ ವ್ಯಾಪಿಸಿದೆ.  ಇದಕ್ಕೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಹೊಣೆ - ಮೊಯ್ಲಿ

ಬೆಂಗಳೂರು(ಸೆ.21): ತಮಿಳುನಾಡಿಗೆ ನೀರು ಬಿಡುವ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚನೆ ಆದೇಶದ ಹಿಂದೆ ಕೇಂದ್ರಸರ್ಕಾರದ ಸಂಚಿದೆ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ ಆರೋಪಿಸಿದ್ಧಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರದ ಕಾನೂನಿನ ಪ್ರತಿನಿಧಿಗಳಾದ ಅಡಿಶಿನಲ್ ಸಾಲಿಸಿಟರ್ ಜನರಲ್ ಅವರು ಮಂಡಳಿ ರಚಿಸುವಂತೆ ಕೇಂದ್ರದ ಪರವಾಗಿ ಸುಪ್ರೀಂಕೋರ್ಟ್`ಗೆ ಮನವಿ ಸಲ್ಲಿಸಿದ್ದಾರೆ. . ಈ ವಿದ್ಯಮಾನಗಳನ್ನ ನೋಡಿದರೆ ಇದರಲ್ಲಿ ರಾಜಕೀಯ ಸಂಚಿದೆ. ಇದರಲ್ಲಿ ರಾಜ್ಯದ ಜನತೆ ಮತ್ತು ರೈತರ ಹಿತಾಸಕ್ತಿಗೆ ವಿರೋಧವಾದ ಸಂಚಿದೆ. ಈ ರಾಜಕೀಯ ಸಂಚು ದೆಹಲಿಯಿಂದ ಬೆಂಗಳೂರಿಗೆ ವ್ಯಾಪಿಸಿದೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಹೊಣೆ ಎಂದು ವೀರಪ್ಪಮೊಯ್ಲಿ ಹೇಳಿದ್ದಾರೆ.