ವಿದ್ಯಾರ್ಥಿಗಳ ಎದುರೇ ಕಡ್ಡಿ ಗೀರಿ ಬೀಡಿಗೆ ಬೆಂಕಿ ಹಚ್ಚಿ ಬೀಡಿ ಸೇದಿದ ಶಿಕ್ಷಕ| ವಿಡಿಯೊ ವೈರಲ್ ಆದ ಬೆನ್ನಲ್ಲೇ ಶಿಕ್ಷಕ ಅಮಾನತ್ತು

ಲಕ್ನೋ[ಅ.07]: ಶಿಕ್ಷಕರೆಂದರೆ ಮಕ್ಕಳಿಗೆ ಮಾದರಿಯಾಗಿರಬೇಕು. ಆದರೆ ಉತ್ತರ ಪ್ರದೇಶದ ಸೀತಾಪುರದ ಶಿಕ್ಷಕನೊಬ್ಬ ಕ್ಲಾಸಲ್ಲೇ ಕುಳಿತು ಬೀಡಿ ಸೇದಿ ಎಡವಟ್ಟು ಮಾಡಿಕೊಂಡಿದ್ದಾನೆ.

ಈತ ವಿದ್ಯಾರ್ಥಿಗಳ ಎದುರೇ ಕಡ್ಡಿ ಗೀರಿ ಬೀಡಿಗೆ ಬೆಂಕಿ ಹಚ್ಚಿ ಸೇದುವುದನ್ನು ಯಾರೋ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದು, ಅದು ವೈರಲ್‌ ಆಗಿದೆ.

Scroll to load tweet…
Scroll to load tweet…

ಈ ವಿಷಯ ರಾಜ್ಯ ಶಿಕ್ಷಣ ಇಲಾಖೆ ಗಮನಕ್ಕೆ ಬಂದಿದ್ದು, ಕೂಡಲೇ ಇಲಾಖೆಯು ಶಿಕ್ಷಕನನ್ನು ಪತ್ತೆ ಹಚ್ಚಿ ಆತನಿಗೆ ಸಸ್ಪೆಂಡ್‌ ಶಿಕ್ಷೆ ವಿಧಿಸಿದೆ. ಶಿಕ್ಷಕರು ಧೂಮಪಾನ ಮಾಡಬಾರದು. ಅದೂ, ಮಕ್ಕಳ ಎದುರಲ್ಲಂತೂ ಮಾಡಲೇಬಾರದು’ ಎಂದಿದ್ದಾರೆ ಶಿಕ್ಷಣಾಧಿಕಾರಿಗಳು.