ಮಮತಾ ಬ್ಯಾನರ್ಜಿಗೆ ಚಕ್ಮಾ ಕೊಟ್ಟ ಉತ್ತರ ಪ್ರದೇಶ ಮುಖ್ಯಮಂತ್ರಿ| ಕೊನೆಗೂ ಬಂಗಾಳ ತಲುಪಿದ ಯೋಗಿ ಆದಿತ್ಯನಾಥ್| ಜಾರ್ಖಂಡ್ ವರೆಗೂ ಹೆಲಿಕಾಪ್ಟರ್ ನಲ್ಲಿ ಪ್ರಯಾಣ| ಜಾರ್ಖಂಡ್ ನಿಂದ ರಸ್ತೆ ಮಾರ್ಗವಾಗಿ ಪ.ಬಂಗಾಳದ ಪುರುಲಿಯಾಗೆ ಪ್ರಯಾಣ| ಪುರುಲಿಯಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಯೋಗಿ ಭಾಷಣ| ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಹರಿಹಾಯ್ದ ಯುಪಿ ಸಿಎಂ

ಪುರುಲಿಯಾ(ಫೆ.05): ಇದನ್ನು ಪ್ರಜಾಪ್ರಭುತ್ವದ ಗೆಲುವಂತಿರೋ?, ಇಲ್ಲಾ ಬಿಜೆಪಿ ಗೆಲುವಂತಿರೋ ನಿಮಗೆ ಬಿಟ್ಟಿದ್ದು. ಆದರೆ ಸತತ ಅನುಮತಿ ನಿರಾಕರಣೆ ನಡುವೆಯೂ ಬಂಗಾಳದ ನೆಲ ಮುಟ್ಟುವಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಯಶಸ್ವಿಯಾಗಿದ್ದಾರೆ.

ಹೌದು, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಯಲು ಪ.ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಸತತವಾಗಿ ಅನುಮತಿ ನಿರಾಕರಿಸುತ್ತಲೇ ಇತ್ತು.

Scroll to load tweet…

ಇಂದೂ ಕೂಡ ಸಿಎಂ ಯೋಗಿ ಹೆಲಿಕಾಪ್ಟರ್ ಇಳಿಯಲು ಅನುಮತಿ ನಿರಾಕರಿಸಲಾಗಿತ್ತು. ಆದರೆ ಇದಕ್ಕೆ ಬೆದರದ ಯೋಗಿ ಆದಿತ್ಯನಾಥ್, ಜಾರ್ಖಂಡ್ ವರೆಗೆ ಹೆಲಿಕಾಪ್ಟರ್ ನಲ್ಲಿ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಪ.ಬಂಗಾಳ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

Scroll to load tweet…

ಪ.ಬಂಗಾಳದ ಪುರುಲಿಯಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಭಾಷಣ ಮಾಡಿದ ಯೋಗಿ, ಮಮತಾ ಬ್ಯಾನರ್ಜಿ ಸರ್ಕಾರ ಭ್ರಷ್ಟ ಅಧಿಕಾರಿಗಳನ್ನು ರಕ್ಷಿಸುವಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

Scroll to load tweet…