ಮಧ್ಯಾಹ್ನ ಹಾಗೂ ರಾತ್ರಿ ಉಟದ ವ್ಯವಸ್ಥೆಯಿರಲಿದ್ದು, ಜನರು ತಾವು ಬಯಸಿದಷ್ಟು ಆಹಾರವನ್ನು ಪಡೆಯಬಹುದಾಗಿದೆ. ಹಸಿವು ಮುಕ್ತ ಯುಪಿಗಾಗಿ ಈ ಯೋಜನೆ ಎಂದು ಸರ್ಕಾರ ಹೇಳಿದೆ.

ಲಖನೌ(ಮೇ.05): ಬಡವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಉತ್ತರಪ್ರದೇಶದಾದ್ಯಂತ 'ಅನ್ನಪೂರ್ಣ ಭೋಜನಾಲಯ'ಗಳನ್ನು ತೆರೆಯಲು ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ.

Add Asianetnews Kannada as a Preferred SourcegooglePreferred

'ಅನ್ನಪೂರ್ಣ ಭೋಜನಾಲಯ'ದಲ್ಲಿ ದಲಿಯಾ, ಇಡ್ಲಿ ಸಾಂಬಾರ್, ಅವಲಕ್ಕಿಯಂತಹ ತಿಂಡಿಗಳು ಕೇವಲ ಮೂರು ರೂಪಾಯಿಗೆ ಮತ್ತು ರೋಟಿ, ದಾಲ್, ಅನ್ನ ಸಾಂಬಾರ್ 5 ರೂಪಾಯಿಗೆ ಒದಗಿಸಲು ಸರ್ಕಾರ ತೀರ್ಮಾನಿಸಿದೆ.

ಮಧ್ಯಾಹ್ನ ಹಾಗೂ ರಾತ್ರಿ ಉಟದ ವ್ಯವಸ್ಥೆಯಿರಲಿದ್ದು, ಜನರು ತಾವು ಬಯಸಿದಷ್ಟು ಆಹಾರವನ್ನು ಪಡೆಯಬಹುದಾಗಿದೆ. ಹಸಿವು ಮುಕ್ತ ಯುಪಿಗಾಗಿ ಈ ಯೋಜನೆ ಎಂದು ಸರ್ಕಾರ ಹೇಳಿದೆ.