Asianet Suvarna News Asianet Suvarna News

ಅಂಬರೀಷ್‌ ನಿಧನಕ್ಕೆ ಲೋಕಸಭೆಯಲ್ಲಿ ಶ್ರದ್ಧಾಂಜಲಿ

ಮಾಜಿ ಸಚಿವ, ಮೂರು ಬಾರಿ ಲೋಕಸಭಾ ಸಂಸದರಾಗಿದ್ದ ಎಂ.ಎಚ್‌.ಅಂಬರೀಷ್‌ ಅವರ ನಿಧನದ ಉಲ್ಲೇಖವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಗುರುವಾರ ಲೋಕಸಭೆಯಲ್ಲಿ ಮಂಡಿಸಿ ಶ್ರದ್ಧಾಂಜಲಿ ವ್ಯಕ್ತಪಡಿಸಿದ್ದಾರೆ. 

Tribute To Ambareesh In Lok Sabha Winter Session
Author
Bengaluru, First Published Dec 14, 2018, 10:23 AM IST

ನವದೆಹಲಿ :  ಕೇಂದ್ರ ಸರ್ಕಾರದ ಮಾಜಿ ಸಚಿವ, ಮೂರು ಬಾರಿ ಲೋಕಸಭಾ ಸಂಸದರಾಗಿದ್ದ ಎಂ.ಎಚ್‌.ಅಂಬರೀಷ್‌ ಅವರ ನಿಧನದ ಉಲ್ಲೇಖವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಗುರುವಾರ ಲೋಕಸಭೆಯಲ್ಲಿ ಮಂಡಿಸಿ ಶ್ರದ್ಧಾಂಜಲಿ ವ್ಯಕ್ತಪಡಿಸಿದ್ದಾರೆ. 

ಬುಧವಾರ ಅಂಬರೀಷ್‌ ಅವರ ಹೆಸರು ಶ್ರದ್ಧಾಂಜಲಿ ಪಟ್ಟಿಯಲ್ಲಿ ಇಲ್ಲದ್ದನ್ನು ಗಮನಿಸಿ ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರು ಗುರುವಾರ ಅಂಬರೀಷ್‌ ಅವರಿಗೆ ಶ್ರದ್ಧಾಂಜಲಿ ಉಲ್ಲೇಖ ಮಾಡುವುದಾಗಿ ಹೇಳಿದ್ದರು.

ಈ ಪ್ರಕಾರ ಗುರುವಾರ ಶ್ರದ್ಧಾಂಜಲಿ ಸಂದೇಶ ಓದಿದ ಸುಮಿತ್ರಾ ಮಹಾಜನ್‌ ‘ಅಂಬರೀಷ್‌ ಅವರು ಕನ್ನಡದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಅವರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ‘ರಂಗನಾಯಕಿ’, ‘ರಾಣಿ ಮಹಾರಾಣಿ’ ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಅಂಬರೀಷ್‌ ಪಾತ್ರ ವಹಿಸಿದ್ದರು. ತಮ್ಮ ಅತ್ಯುತ್ತಮ ಅಭಿನಯಕ್ಕಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಬಂದಿದ್ದವು’ ಎಂದು ಬಣ್ಣಿಸಿದರು.

12,13 ಮತ್ತು 14ನೇ ಲೋಕಸಭೆಯ ಸದಸ್ಯರಾಗಿದ್ದ ಅಂಬರೀಷ್‌, ವಾರ್ತಾ ಮತ್ತು ಪ್ರಚಾರ ಖಾತೆಯ ರಾಜ್ಯ ಸಚಿವರಾಗಿದ್ದನ್ನು ಮತ್ತು ಲೋಕಸಭೆಯ ವಿವಿಧ ಸಮಿತಿಗಳಲ್ಲಿ ಸದಸ್ಯರಾಗಿದ್ದನ್ನು ಸ್ಪೀಕರ್‌ ಉಲ್ಲೇಖಿಸಿದ್ದಾರೆ.

Follow Us:
Download App:
  • android
  • ios