ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವ ಅರುಣ್ ಜೇಟ್ಲಿ ಸಿಹಿ ಸುದ್ದಿ ನೀಡಿದ್ದಾರೆ.
ನವದೆಹಲಿ (ಫೆ.01): ತಂಪಾಕು ಉತ್ಪನ್ನಗಳ ಮೇಲೆ ತೆರಿಗೆಗಳನ್ನು ಏರಿಕೆ ಮಾಡುವ ಮೂಲಕ ತಂಬಾಕು ಪ್ರಿಯರ ಕಿಸೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಸಿ ಮುಟ್ಟಿಸಿದ್ದಾರೆ. ಜತೆಗೆ ಸಾಂಪ್ರದಾಯಿಕ ಇಂಧನಗಳನ್ನು ನೆಚ್ಚಿಕೊಂಡವರಿಗೆ ಸಚಿವರು ಸಿಹಿ ಸುದ್ದಿ ನೀಡಿದ್ದಾರೆ.
ಇನ್ಮುಂದೆ ಈ ವಸ್ತುಗಳು ದುಬಾರಿ:
ಸಿಗರೇಟ್, ಪಾನ್ ಮಸಾಲಾ, ಸಿಗಾರ್, ಬೀಡಿ, ತಂಬಾಕು ಉತ್ಪನ್ನಗಳು
ಎಲ್'ಇಡಿ ದೀಪದ ಭಾಗಗಳು
ಗೋಡಂಬಿ
ಅಲ್ಯುಮಿನಿಯಂ ಅದಿರು
ಬೆಳ್ಳಿ ನಾಣ್ಯ ಹಾಗೂ ಮೆಡಲ್'ಗಳು
ಮೊಬೈಲ್ ಫೋನ್'ನಲ್ಲಿ ಬಳಸಲಾಗುವ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್
ಈ ವಸ್ತುಗಳು ಅಗ್ಗ:
ಆನ್'ಲೈನ್ ಖರೀದಿಸಿದ ರೈಲ್ವೇ ಟಿಕೆಟ್
ಸೋಲಾರ್ ಪ್ಯಾನೆಲ್'ನಲ್ಲಿ ಬಳಸಲಾಗುವ ಗಾಜು
ಪವನಶಕ್ತಿಯಿಂದ ಓಡುವ ಜನರೇಟರ್
ಪಿಓಎಸ್ ಮಶೀನ್'ಗಳು, ಬಯೋಮೆಟ್ರಿಕ್ ಯಂತ್ರಗಳು
ರಕ್ಷಣಾ ಸೇವೆಗಳಿಗೆ ಸಾಮೂಹಿಕ ವಿಮೆ
