ಐಐಎಂನಲ್ಲಿ ಕುಳಿತು ಪಾಠ ಕೇಳಿದ ಯೋಗಿ!| ನಾಯಕತ್ವ ಗುಣಗಳ ವೃದ್ಧಿಸಿಕೊಳ್ಳುವಿಕೆಯ ಮಂಥನ ಕಾರ್ಯಕ್ರಮ

ಲಖನೌ[ಸೆ.09]: ದೇಶದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಅವರ ಸಂಪುಟ ಸದಸ್ಯರು ನಾಯಕತ್ವ ಮತ್ತು ಆಡಳಿತದ ಕುರಿತಾಗಿ ಇಲ್ಲಿನ ಪ್ರತಿಷ್ಠಿತ ಐಐಎಂನಲ್ಲಿ ವಿದ್ಯಾರ್ಥಿಗಳ ರೀತಿ ಕುಳಿತು ಪಾಠವನ್ನು ಆಲಿಸಿದರು.

Add Asianetnews Kannada as a Preferred SourcegooglePreferred

ನಾಯಕತ್ವ ಗುಣಗಳ ವೃದ್ಧಿಸಿಕೊಳ್ಳುವಿಕೆಯ ಮಂಥನ ಕಾರ್ಯಕ್ರಮದ ಭಾಗವಾಗಿ ಸಿಎಂ ಯೋಗಿ ಹಾಗೂ ಅವರ ಸಹೋದ್ಯೋಗಿಗಳು ವಾಣಿಜ್ಯ ವಿಭಾಗದ ಹಿರಿಯ ಬೋಧಕ ಸಿಬ್ಬಂದಿಯಿಂದ ತರಬೇತಿ ಪಡೆದರು.

Scroll to load tweet…

ಬಳಿಕ ಈ ಬಗ್ಗೆ ಮಾತನಾಡಿದ ಯೋಗಿ, ‘ಜೀವನದಲ್ಲಿ ಬರುವ ಕಲಿಕೆಯ ಅವಕಾಶಗಳನ್ನು ಬಾಚಿಕೊಳ್ಳಬೇಕು’ ಎಂದು ಹೇಳಿದರು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲು ಇಂಥ ತರಬೇತಿಗಳು ಅತ್ಯಗತ್ಯ ಎಂದು ಯೋಗಿ ಪ್ರತಿಪಾದಿಸಿದರು.