ಬೆಂಗಳೂರು(ಅ.2): ಕಾವೇರಿ ವಿಷಯವಾಗಿ ತಮಿಳುನಾಡು ರಾಜಕಾರಣಿಗಳು ಸದಾ ಜಗಳ ತೆಗೆಯುತ್ತಲೆ ಬಂದಿದ್ದಾರೆ. ಜೊತೆಗೆ ನಮ್ಮ ಜನಗಳ ಜೊತೆ ರಾಜಕಾರಣಿಗಳಿಗೂ ತೊಂದರೆ ಕೊಡುತ್ತಿದ್ದಾರೆ. ಈಗ ಪೊಲೀಸರ ಸರದಿ ಶುರುವಾಗಿದೆ. ಕೊಲೆ ಕೇಸಿನ ವಿಚಾರವಾಗಿ ಮಪ್ತಿಯಲ್ಲಿ ತಮಿಳುನಾಡಿಗೆ ಖಾಸಗಿ ವಾಹನದಲ್ಲಿ ತೆರಳುತ್ತಿದ್ದ ಅತ್ತಿಬೆಲೆ ಪಿಎಸ್ಐ ಹಾಗೂ ಸಿಬ್ಬಂದಿಯನ್ನು ತಮಿಳುನಾಡು ಪೊಲೀಸರು ಗಡಿಯಲ್ಲಿ ತಡೆದು ಕ್ಯಾತೆ ತೆಗೆದಿದ್ದಾರೆ. ಅತ್ತಿಬೆಲೆ ಪಿಎಸ್ಐ ಶ್ರೀನಿವಾಸ್ ಐಡಿ ಕಾರ್ಡ್ ತೋರಿಸಿದರೂ ತಮಿಳುನಾಡು ಪೊಲೀಸರು ಗಡಿ ಪ್ರವೇಶಿಸಲು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ಇದೀಗ ಎರಡು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಸಂಧಾನ ನಡೆಸಿದ್ದಾರೆ.
ರಾಜಕಾರಣಿಗಳಾಯಿತು ಈಗ ಪೊಲೀಸರ ಸರದಿ: ಕನ್ನಡಿಗರೊಂದಿಗೆ ತಮಿಳರ ಜಗಳ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos
