ರಾಜ್ಯದಲ್ಲಿ  ಬೇಸಿಗೆ  ಶುರುವಾಗುತ್ತಿದ್ದಂತೆ  ನೀರಿನ ಸಮಸ್ಯೆ ತಲೆದೂರುತ್ತೆ.  ಕೆಆರ್'​ಎಸ್​ ಜಲಾಶಯದಿಂದಲೇ  ರಾಜ್ಯದ ಬಹುತೇಕ ಭಾಗಗಳಿಗೆ ನೀರು ಪೂರೈಕೆಯಾಗುತ್ತೆ.  ಇನ್ನು   ಕಾವೇರಿ ತೀರ್ಪು ಬರುವ ಹಿನ್ನಲೆಯಲ್ಲಿ  ಕೆಆರ್'ಎಸ್'ಗೆ  ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.

ಬೆಂಗಳೂರು (ಫೆ.05): ರಾಜ್ಯದಲ್ಲಿ ಬೇಸಿಗೆ ಶುರುವಾಗುತ್ತಿದ್ದಂತೆ ನೀರಿನ ಸಮಸ್ಯೆ ತಲೆದೂರುತ್ತೆ. ಕೆಆರ್'​ಎಸ್​ ಜಲಾಶಯದಿಂದಲೇ ರಾಜ್ಯದ ಬಹುತೇಕ ಭಾಗಗಳಿಗೆ ನೀರು ಪೂರೈಕೆಯಾಗುತ್ತೆ. ಇನ್ನು ಕಾವೇರಿ ತೀರ್ಪು ಬರುವ ಹಿನ್ನಲೆಯಲ್ಲಿ ಕೆಆರ್'ಎಸ್'ಗೆ ಬಿಗಿ ಪೋಲಿಸ್ ಭದ್ರತೆ ಒದಗಿಸಲಾಗಿದೆ.

ಒಂದು ವೇಳೆ ತೀರ್ಪಿನಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾದರೆ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಪೋಲಿಸ್ ಇಲಾಖೆ ಎಚ್ಚರವಹಿಸಿದೆ. ಎಲ್ಲ ಸಂಘಟನೆಗಳ ಜೊತೆ ಶಾಂತಿ ಸಭೆ ನಡೆಸಿ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆಗೆ ಅವಕಾಶ ನೀಡಲಾಗಿದೆ. ಕೆಎಸ್ಆರ್ ಪಿ, ಡಿಆರ್ ತುಕಡಿಗಳನ್ನ ನಿಯೋಜಿಸಿಕೊಂಡು, ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಬಹುಮುಖ್ಯವಾಗಿ ಕೆಆರ್'ಎಸ್ ಅಣೆಕಟ್ಟಿಗೆ ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.