ಒತ್ತುವರಿ ತೆರವಿಗೆ ದೇಶಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕು ಎಂದು ಕೋರಿ ‘ವಾಯ್ಸ್ ಆಫ್‌ ಇಂಡಿಯಾ' ಎಂಬ ಎನ್‌ಜಿಒದ ಧನೇಶ್‌ ಲೆಶ್‌ಧನ್‌ ಎಂಬುವರು ಅರ್ಜಿ ಸಲ್ಲಿಸಿದ್ದರು.

ನವದೆಹಲಿ: ಮತ ಹಾಕದವರಿಗೆ ಸರ್ಕಾರ ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒತ್ತುವರಿ ತೆರವಿಗೆ ದೇಶಾದ್ಯಂತ ಅನ್ವಯವಾಗುವಂತಹ ಆದೇಶ ಹೊರಡಿಸಬೇಕು ಎಂದು ಕೋರಿ ‘ವಾಯ್ಸ್ ಆಫ್‌ ಇಂಡಿಯಾ' ಎಂಬ ಎನ್‌ಜಿಒದ ಧನೇಶ್‌ ಲೆಶ್‌ಧನ್‌ ಎಂಬುವರು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ವೇಳೆ ಸ್ವತ ವಾದ ಮಂಡಿಸಿದ ಧನೇರ್ಶ, ಸರ್ಕಾರಗಳು ಒತ್ತುವರಿ ತೆರ ವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿ ದರು. ಈ ವೇಳೆ ‘ನೀವು ಮತದಾನ ಮಾಡಿದ್ದೀರೋ? ಇಲ್ಲವೋ?' ಎಂದು ಸಿಜೈ ಜೆ.ಎಸ್‌. ಖೇಹರ್‌ ನೇತೃತ್ವದ ಪೀಠ ಪ್ರಶ್ನಿಸಿತು.

ಆಗ ‘ಸತ್ಯ ಹೇಳುತ್ತೇನೆ. ಜೀವನದಲ್ಲಿ ಎಂದಿಗೂ ಮತದಾನ ಮಾಡಿದವ ನಾನಲ್ಲ' ಎಂದು ಧನೇಶ್‌ ಹೇಳಿದಾಗ ನ್ಯಾಯಪೀಠ ಅಸಮಾಧಾನಗೊಂಡಿತು.ಜೊತೆಗೆ ಮತ ಹಾಕದವರೆಗೆ ಸರ್ಕಾರವನ್ನು ಪ್ರಶ್ನಿಸುವ ಅಥವಾ ದೂಷಿಸುವ ಹಕ್ಕಿರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.