ಕೃಷ್ಣ ಮೃಗ ಬೇಟೆ ಪ್ರಕರಣ : ಇನ್ನೋರ್ವ ಖಾನ್ ಬಂಧನ
ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜೈಲು ಪಾಲಾಗುತ್ತಿದ್ದಂತೆ ಇದೇ ರೀತಿ ಕೃಷ್ಣ ಮೃಗ ಕೊಂದ ಪ್ರಕರಣ ಸಂಬಂಧ ಇನ್ನೋರ್ವ ಖಾನ್ ಕೂಡ ಅರೆಸ್ಟ್ ಆಗಿರುವುದು ಬೆಳಕಿಗೆ ಬಂದಿದೆ.
ಹೈದ್ರಾಬಾದ್ : ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್ ಖಾನ್ ಜೈಲು ಪಾಲಾಗುತ್ತಿದ್ದಂತೆ ಇದೇ ರೀತಿ ಕೃಷ್ಣ ಮೃಗ ಕೊಂದ ಪ್ರಕರಣ ಸಂಬಂಧ ಇನ್ನೋರ್ವ ಖಾನ್ ಕೂಡ ಅರೆಸ್ಟ್ ಆಗಿರುವುದು ಬೆಳಕಿಗೆ ಬಂದಿದೆ.
ಹೈದ್ರಾಬಾದ್’ನ ವೈದ್ಯರಾದ ಡಾ. ಮುಜಾಹಿದ್ದಿನ್ ಅಲಿ ಖಾನ್ ಹಾಗೂ ಇತರೆ ನಾಲ್ಕು ಜನರನ್ನು ಮಾರ್ಚ್ 30ರಂದು ಬಂಧಿಸಲಾಗಿದೆ. ಭಾರತೀಯ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ.
ಮೂರು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣ ಸಂಬಂಧ ಕರ್ನಾಟಕ ಪೊಲೀಸರು ಇವರನ್ನು ಬಂಧಿಸಿದ್ದಾರೆ.