ಮಳೆ ಬಂದಾಗಲೇ ನಗರಗಳ ಅವ್ಯವಸ್ಥೆ ಅನಾವರಣ
ಮೊನ್ನೆಯ ಮಳೆಗೆ ಬೆಂಗಳೂರಿನ ರಾಜಾಕಾಲುವೆಯಲ್ಲಿ ಒಬ್ಬ ಕಾರ್ಮಿಕ ಕೊಚ್ಚಿಕೊಂಡು ಹೋಗಿದ್ದಾನೆ. ಇದು ಈ ವರ್ಷದ ಮಾತಷ್ಟೇ ಅಲ್ಲ; ಪ್ರತಿ ವರ್ಷ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಒಂದಿಬ್ಬರಾದರೂ ರಾಜಾಕಾಲುವೆಯಲ್ಲಿ ಕೊಚ್ಚಿ ಹೋಗುವ ಘಟನೆಗಳು ನಡೆಯುತ್ತವೆ. ಆಟವಾಡುವ ಮಕ್ಕಳು ಆಯತಪ್ಪಿ ಕಾಲುವೆಗೆ ಬಿದ್ದು ತೇಲಿಸಿಕೊಂಡು ಹೋಗಿರುವುದೂ ಇದೆ. ಆಗೆಲ್ಲ ಒಂದೆರಡು ದಿನ ಆಯಾ ಘಟನೆಗಳು ದೊಡ್ಡ ಸುದ್ದಿಯಾಗುತ್ತವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
