'ಲೋಕಾಯುಕ್ತ ಪೊಲೀಸರಿಗೆ ಲಾಠಿ, ಕೋಲು ಹಿಡಿಯೋದು ಬಿಟ್ಟರೆ ಬೇರೆ ಅನುಭವವಿಲ್ಲ'
ಲೋಕಾಯುಕ್ತ ಸಂಸ್ಥೆಯಿರುವುದೇ ಜನರಿಗಾಗಿ. ಎಲ್ಲಾ ರೀತಿಯ ಜನರು ಇಲ್ಲಿಗೆ ಬರ್ತಾರೆ. ಲೋಕಾಯುಕ್ತರಿಂದ ಜನರನ್ನು ದೂರವಿಟ್ಟರೆ ಅದರಿಂದ ಆಗುವ ದುಷ್ಪರಿಣಾಮಗಳೇ ಹೆಚ್ಚು. ಜನರಿಗೆ ಭೇಟಿ ಮಾಡಲು ಅವಕಾಶವನ್ನು ನೀಡಬೇಕು ಹಾಗೂ ಸೂಕ್ತ ಭದ್ರತೆಯನ್ನೂ ಒದಗಿಸಬೇಕು ಎಂದು ಸುಭಾಶ್ ಅಡಿ ಹೇಳಿದ್ದಾರೆ.
ಭಾಗಲಕೋಟೆ(ಮಾ.10): ಸೂಕ್ತ ಭದ್ರತೆಯಿದ್ದಿದ್ದರೆ ಲೋಕಾಯುಕ್ತರ ಮೇಲೆ ದಾಳಿ ನಡೆಯುತ್ತಿರಲಿಲ್ಲ ಎಂದು ನಿವೃತ್ತ ಉಪ ಲೋಕಾಯುಕ್ತ ಸುಭಾಷ್ ಅಡಿ ಹೇಳಿದ್ದಾರೆ.
ಭಾಗಲಕೋಟೆಯಲ್ಲಿ ಮಾತನಾಡಿದ ಅವರು, ಭದ್ರತೆಗೆ ಪೊಲೀಸರನ್ನು ನಿಯೋಜನೆ ಮಾಡಿದರಷ್ಟೇ ಸಾಲದು, ಪರಿಣಿತ ಪೊಲೀಸರನ್ನು ನಿಯೋಜಿಸಬೇಕು. ಅಲ್ಲಿರುವ ಪೊಲೀಸರಿಗೆ ಲಾಠಿ, ಕೋಲು ಹಿಡಿಯೋದನ್ನು ಬಿಟ್ಟರೆ ಬೇರೆ ಅನುಭವ ಗೊತ್ತಿಲ್ಲ ಎಂದು ಭದ್ರತೆಯ ಗುಣಮಟ್ಟದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ.
ಲೋಕಾಯುಕ್ತ ಸಂಸ್ಥೆಯಿರುವುದೇ ಜನರಿಗಾಗಿ. ಎಲ್ಲಾ ರೀತಿಯ ಜನರು ಇಲ್ಲಿಗೆ ಬರ್ತಾರೆ. ಲೋಕಾಯುಕ್ತರಿಂದ ಜನರನ್ನು ದೂರವಿಟ್ಟರೆ ಅದರಿಂದ ಆಗುವ ದುಷ್ಪರಿಣಾಮಗಳೇ ಹೆಚ್ಚು. ಜನರಿಗೆ ಭೇಟಿ ಮಾಡಲು ಅವಕಾಶವನ್ನು ನೀಡಬೇಕು ಹಾಗೂ ಸೂಕ್ತ ಭದ್ರತೆಯನ್ನೂ ಒದಗಿಸಬೇಕು ಎಂದು ಸುಭಾಶ್ ಅಡಿ ಹೇಳಿದ್ದಾರೆ.