ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ.  ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ. 

ಹೈದರಾಬಾದ್ (ಆ. 29): ತೆಲುಗು ನಟ ನಂದಮೂರಿ ಹರಿಕೃಷ್ಣ ಅಪಘಾತದಲ್ಲಿ ದುರ್ಮರಣವನ್ನಪ್ಪಿದ್ದಾರೆ. 

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೆಪರ್ತಿ ಬಳಿ ಭೀಕರ ಅಪಘಾತ ಸಂಭವಿಸಿ ನಂದಮುರಿ ಹರಿಕೃಷ್ಣ ವಿಧಿವಶರಾಗಿದ್ದಾರೆ. ಆಂಧ್ರ ಮಾಜಿ ಸಿಎಂ ಎನ್​ಟಿಆರ್​ ಹಿರಿಯ ಪುತ್ರ ಇವರು. ಸೀತಯ್ಯ, ಸೀತಾರಾಮು, ಸಿವರಾಮ ರಾಜು, ಟೈಗರ್​ ಹರಿಶ್ಚಂದ್ರ ಪ್ರಸಾದ್​ ಸೇರಿ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 

"

ನಲಗುಂಡ ಬಳಿಯ ರಸ್ತೆಯಲ್ಲಿ ಹರಿಕೃಷ್ಣ ಸೇರಿದಂತೆ ನಾಲ್ಕು ಮಂದಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಮುಗುಚಿ ಬಿದ್ದು ಹರಿಕೃಷ್ಣ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ನಾರ್ಕಟ್​ಪಲ್ಲಿಯ ಕಾಮಿನೇನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ನೆಲ್ಲೂರಿನಲ್ಲಿ ನಡೆದ ಅಭಿಮಾನಿಯ ಮದುವೆಯಲ್ಲಿ ಭಾಗವಹಿಸಿ ಹೈದರಾಬಾದ್​ಗೆ ವಾಪಸ್ಸಾಗುವಾಗ ಈ ದುರ್ಘಟನೆ ನಡೆದಿದೆ. ವಿಷಯ ತಿಳಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮೆಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಆಸ್ಪತ್ರೆಗೆ ಧಾವಿಸಿದ್ದಾರೆ. 

ಸಾವಿಗೂ ಮುನ್ನ ಹರಿಕೃಷ್ಣ ಮಾನವಿಯತೆ ಮೆರೆದ ಧೀಮಂತ

ಸೆಪ್ಟೆಂಬರ್ 2 ರಂದು ತನ್ನ ಹುಟ್ಟು ಹಬ್ಬದ ದಿನ ತನ್ನ ಅಭಿಮಾನಿಗಳು ವ್ಯರ್ಥ ವಾಗಿ ಕೇಕ್,ಬ್ಯಾನರ್, ಸಂಭ್ರಮ ದ ದುಂಡು ವೆಚ್ಚ ಹಣ ಖರ್ಚುಗಳನ್ನು ಮಾಡಬೇಡಿ. ಅದೇ ಖರ್ಚು ಹಣವನ್ನು ಕೇರಳ,ಕೊಡಗು ನೆರೆಸಂತ್ರಸ್ಥರಿಗೆ ಧನ ಸಹಾಯ ಮಾಡಿ ಅದೇ ನೀವು ನನ್ನ ಹುಟ್ಟು ಹಬ್ಬಕ್ಕೆ ಸಲ್ಲಿಸುವ ಪ್ರೀತಿ ಎಂದು ತನ್ನ ಅಭಿಮಾನಿಗಳಿ ಸ್ವತಃ ಹರಿಕೃಷ್ಣ ರೇ ಕೈ ಬರಹದಿಂದ ಪತ್ರ ಬರೆದಿದ್ದಾರೆ.