ವಿದ್ಯಾರ್ಥಿಗಳು ತಮ್ಮ ಆಧಾರ್‌ ಕಾರ್ಡ್‌ ಹಿಡಿದು ನೋಟು ಬದಲಿಸಲು ನವನಗರದ ಯೂನಿಯನ್‌ ಬ್ಯಾಂಕ್‌ ಮುಂದೆ ಕ್ಯೂನಲ್ಲಿ ನಿಂತಿದ್ದಾಗ ಸ್ಥಳೀಯರು ವಿಚಾ​​ರಿ​ಸಿದ್ದಾರೆ.

ಹುಬ್ಬಳ್ಳಿ (ನ.14): ನವನಗರದ ಶಿವಾನಂದ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕರೊಬ್ಬರು ರೂ.1000 ಮುಖಬೆಲೆಯ ನೋಟುಗಳನ್ನು ಬದಲಿಸಲು ವಿದ್ಯಾರ್ಥಿಗಳನ್ನು ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Add Asianetnews Kannada as a Preferred SourcegooglePreferred

ವಿದ್ಯಾರ್ಥಿಗಳು ತಮ್ಮ ಆಧಾರ್‌ ಕಾರ್ಡ್‌ ಹಿಡಿದು ನೋಟು ಬದಲಿಸಲು ನವನಗರದ ಯೂನಿಯನ್‌ ಬ್ಯಾಂಕ್‌ ಮುಂದೆ ಕ್ಯೂನಲ್ಲಿ ನಿಂತಿದ್ದಾಗ ಸ್ಥಳೀಯರು ವಿಚಾ​​ರಿ​ಸಿದ್ದಾರೆ. ಶಿಕ್ಷಕ ತಮ್ಮಲ್ಲಿದ್ದ ರೂ.1000 ನೋಟು​ಗ​ಳ​ನ್ನು ಬದಲಿಸುವಂತೆ ನೀಡಿದ್ದಾರೆಂದು ತಿಳಿ​ಸಿ​ದ್ದಾರೆ. ಸ್ಥಳದ್ದಲ್ಲಿದ್ದವರು ಇದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿ​ದಿದ್ದು, ವಿಡಿಯೋ ವಾಟ್ಸ್ಯಾಪ್‌ನಲ್ಲಿ ಹರಿದಾಡುತ್ತಿವೆ.

ರೂ.2 ಸಾವಿರ ನೋಟು ಅಪಹರಿಸಿ ಪರಾರಿ: ಕೊಡಗು ಜಿಲ್ಲೆ ಶನಿವಾರಸಂತೆ ಸಮೀಪದ ದೊಡ್ಡಳ್ಳಿ ನಿವಾಸಿ ಯೋಗೇಶ್‌ ಎಂಬುವವರಿಂದ ರೂ.2 ಸಾವಿರದ ನೋಟನ್ನು ನೋಡಿ​ಕೊಡುವುದಾಗಿ ಪಡೆದ ಕಿಡಿಗೇಡಿಯೊಬ್ಬ ನೋಟು ಪಡೆದು ಪರಾರಿಯಾದ ಘಟನೆ ಗುಡುಗಳಲೆ ಜಂಕ್ಷನ್‌ನಲ್ಲಿರುವ ಕೆನರಾ ಬ್ಯಾಂಕ್‌ ಮುಂದೆ ನಡೆದಿದೆ.