ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್, ಎಐಎಡಿಎಂಕೆ ಲಂಚ ನೀಡಿಕೆ ಪ್ರಕರಣ ಇದೇ ಮೊದಲಲ್ಲ. ಮತದಾರರನ್ನು ಒಳಗೊಂಡಂತೆ ಚುನಾವಣಾ ಆಯೋಗಕ್ಕೂ ಅವರು ಲಂಚ ನೀಡಿದ್ದರು. ಈಗ ಸೆರಮನೆ ಸಿಬ್ಬಂದಿಗೆ ನೀಡುತ್ತಿದ್ದಾರೆ ಅಷ್ಟೆ'

ಚೆನ್ನೈ(ಜು.13): ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಶಶಿಕಲಾ ಸೆರೆಮನೆಯಲ್ಲಿ 2 ಕೋಟಿ ಕೊಟ್ಟು ರಾಜಾತಿಥ್ಯ ಪಡೆಯುತ್ತಿರುವ ಬಗ್ಗೆ ರಾಜ್ಯ ಕಾರಾಗೃಹಗಳ ಡಿಐಜಿ ಡಿ.ರೂಪ ಅವರು ಆರೋಪ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ವಿರೋಧ ಪಕ್ಷ ಡಿಎಂಕೆ ಆಗ್ರಹಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶಶಿಕಲಾಗೆ ವಿಶೇಷ ಕೊಠಡಿ ಸೇರಿದಂತೆ ಹಲವು ಸೌಲಭ್ಯ ನೀಡಲಾಗಿದ್ದು, ಇದರಲ್ಲಿ ಜೈಲು ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಡಿ.ರೂಪ ಅವರು ಮಾಡಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಎಂಕೆ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್, ಎಐಎಡಿಎಂಕೆ ಲಂಚ ನೀಡಿಕೆ ಪ್ರಕರಣ ಇದೇ ಮೊದಲಲ್ಲ. ಮತದಾರರನ್ನು ಒಳಗೊಂಡಂತೆ ಚುನಾವಣಾ ಆಯೋಗಕ್ಕೂ ಅವರು ಲಂಚ ನೀಡಿದ್ದರು. ಈಗ ಸೆರಮನೆ ಸಿಬ್ಬಂದಿಗೆ ನೀಡುತ್ತಿದ್ದಾರೆ ಅಷ್ಟೆ'

ಈ ಬಗ್ಗೆ ಎಲ್ಲ ಹಂತಗಳಿಂದ ಸಮಗ್ರವಾಗಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಈ ನಡುವೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಲಂಚ ನೀಡಿಕೆಯ ಪ್ರಕರಣಗಳ ಬಗ್ಗೆ ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.