ಪ್ರವಾಹದಿಂದ ನಲುಗಿದ್ದ ಕೊಡಗು, ಆದರೂ ಪಾಠ ಕಲಿಯದ ಜಿಲ್ಲಾಡಳಿತ| ದುರಂತ ಸಂಭವಿಸಿ ವರ್ಷ ಕಳೆದಿಲ್ಲ ಮತ್ತೆ 890 ಮರಗಳನ್ನು ಕಡಿಯಲು ಅನುಮತಿ| ಮರ ಕಡಿಯಿರಿ, ರೆಸಾರ್ಟ್ ನಿರ್ಮಿಸಿ| ಜಿಲ್ಲಾಡಳಿತದ ಆದೇಶಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್| ಮರ ಕಡಿಯುವುದನ್ನು ಈಗಲೇ ನಿಲ್ಲಿಸಿ, ಜಿಲ್ಲಾಡಳಿತಕ್ಕೆ ಸಿಎಂ ಖಡಕ್ ಆದೇಶ| ಇದು ಸುವರ್ಣ ನ್ಯೂಸ್ ಇಂಪ್ಯಾಕ್ಟ್

ಕೊಡಗು[ಜೂ.07]: ಕಳೆದ ವರ್ಷವಷ್ಟೇ ಸುರಿದಿದ್ದ ಭಾರೀ ಮಳೆಯಿಂದ ಪ್ರವಾಹಕ್ಕೀಡಗಿದ್ದ ಕೊಡಗು ಹಲವಾರು ಸಮಸ್ಯೆಗಳನ್ನೆದುರಿಸಿತ್ತು. ನೀರಿನ ರಭಸಕ್ಕೆ ಭೂಕುಸಿತ ಸಂಭವಿಸಿದ್ದು, ಕಟ್ಟಡಗಳೂ ಕೊಚ್ಚಿ ಹೋಗಿದ್ದವು. ಬಹುತೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ಬಳಿಕ ನಡೆದ ಅಧ್ಯಯನಗಳಲ್ಲಿ ಕೊಡಗಿನಲ್ಲಿ ಮರಗಳ ನಾಶ, ರೆಸಾರ್ಟ್ ನಿರ್ಮಾಣದಿಂದಾಗಿ ಈ ಪರಿಸ್ಥಿತಿ ಎದುರಾಗಿತ್ತೆಂಬ ಅಂಶ ಬಯಲಾಗಿತ್ತು. ಈ ಭೀಕರ ಘಟನೆ ನಡೆದು ಇನ್ನೂ ಒಂದು ವರ್ಷ ಕಳೆದಿಲ್ಲ, ಅಷ್ಟರಲ್ಲಾಗಲೇ ಕೊಡಗು ಜಿಲ್ಲಾಡಳಿತ ಇಂತಹ ದುರಂತಗಳು ಸಂಭವಿಸದಂತೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವ ಬದಲಾಗಿ ಇನ್ನಷ್ಟು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"

ಹೌದು ಈ ದುರಂತದಿಂದ ಪಾಠ ಕಲಿಯದ ಕೊಡಗು ಜಿಲ್ಲಾಡಳಿತ ಇಲ್ಲಿನ 68 ಎಕರೆ ಪ್ರದೇಶವನ್ನು ಆಂಧ್ರ ಮೂಲದ ಉದ್ಯಮಿಗೆ ನೀಡಿತ್ತು. ಅತ್ತ ಅರಣ್ಯ ಇಲಾಖೆ 890 ಮರಗಳಿಗೆ ಕೊಡಲಿ ಹಾಕಲು ಅನುಮತಿ ನೀಡುವ ಮೂಲಕ ಮತ್ತೊಂದು ದುರಂತಕ್ಕೆ ಹಾದಿ ಮಾಡಿ ಕೊಡಲು ತಯಾರಾಗಿತ್ತು. 

"

ಈ ಕುರಿತಾಗಿ ಸುವರ್ಣ ನ್ಯೂಸ್ ವರದಿ ಮಾಡಿದ್ದು, ಮರಗಳ ಮಾರಣಹೋಮ ತಡೆಯಲು ಯತ್ನಿಸಿತ್ತು. ಈ ಪ್ರಯತ್ನಕ್ಕೆ ಫಲ ಲಭಿಸಿದ್ದು, ಮರಗಳ ನಾಶಕ್ಕೆ ಸಿಎಂ ಕುಮಾರಸ್ವಾಮಿ ಬ್ರೇಕ್ ಹಾಕಿದ್ದಾರೆ. 890 ಮರಗಳನ್ನು ಕಡಿಯುವ ಆದೇಶವನ್ನು ಹಿಂಪಡೆದಿದ್ದು, ಮರಗಳ ಮಾರಣ ಹೋಮವನ್ನು ಕೂಡಲೇ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಖಡಕ್ ಆದೇಶ ನೀಡಿದ್ದಾರೆ.