ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್​ ಮಾಡಿ ಹಿಡಿದು ದಾವಣಗೆರೆಯ ರೇಷನ್​ ಮಾಫಿಯಾದ ಕಿಂಗ್​ಪಿನ್​ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು.  

ಬಡವರ ಅನ್ನದ ಬಟ್ಟಲು ಸೇರಬೇಕಾದ ಅನ್ನಭಾಗ್ಯದ ಸೌಭಾಗ್ಯವನ್ನ ರೇಷನ್​ ಅಂಗಡಿಯಿಂದಲೇ ಕದ್ದು ಮಾರುತ್ತಿದ್ದ ಭ್ರಷ್ಟರ ಬಣ್ಣ ಬಯಲು ಮಾಡಿತ್ತು ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ. ಈ ಕಾರ್ಯಾಚರಣೆಗೆ ಕೈಜೋಡಿಸಿರೋ ಆಹಾರ ಇಲಾಖೆ ಅನ್ನಕ್ಕೆ ಕನ್ನ ಹಾಕುತ್ತಿದ್ದವರಿಗೆ ಭರ್ಜರಿ ಗುನ್ನ ಕೊಟ್ಟಿದೆ.

ಸುವರ್ಣ ನ್ಯೂಸ್ ಕವರ್ ಸ್ಟೋರಿ ತಂಡ ಬಡವರ ಅನ್ನ ಭಾಗ್ಯಕ್ಕೆ ಕನ್ನ ಹಾಕುತ್ತಿದ್ದ ಖದೀಮರನ್ನ ಚೇಸ್​ ಮಾಡಿ ಹಿಡಿದು ದಾವಣಗೆರೆಯ ರೇಷನ್​ ಮಾಫಿಯಾದ ಕಿಂಗ್​ಪಿನ್​ಗಳಾದ ಜಯಣ್ಣ ಹಾಗೂ ಉಮಾಪತಿ ನಡೆಸುತ್ತಿದ್ದ ಕರಾಳ ದಂಧೆಯನ್ನು ಬಟಾಬಯಲು ಮಾಡಿತ್ತು. ಜೊತೆಗೆ ಈ ಖದೀಮರಿಗೆ ಸಾಥ್​ ಕೊಟ್ಟು ಅವರ ದಂಧೆಗೆ ಸಹಕರಿಸುತ್ತಿದ್ದ, ದಾವಣಗೆರೆ ಜಿಲ್ಲೆಯ ಪ್ರಭಾವಿ ಶಾಸಕರೊಬ್ಬರ ಅಕ್ಕಿ ಮಿಲ್​ ಶಂಕರ್​ ರೈಸ್​ ಮಿಲ್​ನ ಕರಾಳ ಮುಖವನ್ನು ಕಳಚಿತ್ತು.

ಕವರ್​ಸ್ಟೋರಿ ಕಾರ್ಯಾಚರಣೆಗೆ ಆಹಾರ ಇಲಾಖೆ ಅಧಿಕಾರಿಗಳು ಸಾಥ್​ ನೀಡಿ ದಾವಣಗೆರೆ ಹರಿಹರ ಮಧ್ಯೆ ಇರೋ ಉಮಾಪತಿಯ ಗೋಡೌನ್​ ಮೇಲೆ ದಾಳಿ ಮಾಡಿ, ಅಲ್ಲಿನ ಆಹಾರ ಇಲಾಖೆಯ ಚೀಲದ ಜೊತೆ ತುಂಬಿಸಿಟ್ಟಿದ್ದ 115 ಅಕ್ಕಿ ಹಾಗೂ 4 ಕ್ವಿಂಟಾಲ್​ ರಾಗಿ ವಶ ಪಡಿಸಿಕೊಂಡು ಗೋಡೌನ್​ ಮಾಲೀಕ ಉಮಾಪತಿ ಮೇಲೆ ಕೇಸ್​ ದಾಖಲಿಸಿದ್ದಾರೆ.

ಸುವರ್ಣ ನ್ಯೂಸ್​ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ ಆಹಾರ ಸಚಿವ ಯು.ಟಿ ಖಾದರ್​ ರೇಷನ್​ ಕಳ್ಳರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ರಾಜ್ಯದಲ್ಲಿರೋ ಇನ್ನಷ್ಟು ರೇಷನ್​ ಕಳ್ಳರ ಮಾಫಿಯಾಕ್ಕೆ ಬ್ರೇಕ್​ ಹಾಕಲು ಸರ್ಕಾರ ಮುಂದಾಗಬೇಕು.

ವರದಿ: ವರದ್​ರಾಜ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​