Asianet Suvarna News Asianet Suvarna News

ಮಂಗಳದಲ್ಲಿ ಸಿಕ್ಕಿಬಿದ್ದರೂ ರಕ್ಷಣೆ: ಅಭಿಮಾನಿಗೆ ಸಚಿವೆ ಸುಷ್ಮಾ ಸ್ವರಾಜ್‌ ಟಾಂಗ್‌!

ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀ ಯರ ರಕ್ಷಣೆ ಮಾಡುವಲ್ಲಿ ಸಖತ್‌ ಫೇಮಸ್‌ ಆಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಗುರುವಾರ ತಮ್ಮ ಟ್ವೀಟರ್‌ ಹಿಂಬಾಲಕರೊಬ್ಬರಿಗೆ ನೀಡಿದ ಟಾಂಗ್‌ ಭರ್ಜರಿ ಫೇಮಸ್‌ ಆಗಿದೆ.

Sushma Twitter Reply Goes Viral

ನವದೆಹಲಿ: ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀ ಯರ ರಕ್ಷಣೆ ಮಾಡುವಲ್ಲಿ ಸಖತ್‌ ಫೇಮಸ್‌ ಆಗಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಗುರುವಾರ ತಮ್ಮ ಟ್ವೀಟರ್‌ ಹಿಂಬಾಲಕರೊಬ್ಬರಿಗೆ ನೀಡಿದ ಟಾಂಗ್‌ ಭರ್ಜರಿ ಫೇಮಸ್‌ ಆಗಿದೆ.

ಕರಣ್‌ ಎಂಬಾತ ಸುಷ್ಮಾಗೆ ನಾನು ಮಂಗಳ ಗ್ರಹದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. 987 ದಿನಗಳ ಹಿಂದೆ ಮಂಗಳಯಾನದಲ್ಲಿ ಕಳುಹಿಸಿದ್ದ ಆಹಾರ ಮುಗಿದಿದೆ. ಮಂಗಳಯಾನ 2 ಯಾವಾಗ ಎಂದು ಟ್ವೀಟರ್‌ನಲ್ಲಿ ಸಂದೇಶ ರವಾನಿಸಿದ್ದ.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿ ರುವ ಸುಷ್ಮಾ, ಭಾರತೀಯರು ಯಾವ ಗ್ರಹದಲ್ಲಿ ಸಿಕ್ಕಿಬಿದ್ದರೂ, ನಮ್ಮ ದೂತಾವಾಸ ಅವರನ್ನು ರಕ್ಷಿಸಲಿದೆ ಎಂದು ಟಾಂಗ್‌ ನೀಡಿದ್ದಾರೆ.

Follow Us:
Download App:
  • android
  • ios