ಕಲ್ಮಾಡಿಗೆ ಅಚ್ಛೇದಿನ್ ಪ್ರಾರಂಭವಾಗಿವೆ ಎಂದು ಕೆಲವರು ಕೇಂದ್ರ ಸರ್ಕಾರವನ್ನು ಕಿಚಾಯಿಸಿದ್ದಾರೆ.
ಮುಂಬೈ(ಡಿ.27): ಹಗರಣಗಳ ಕೂಪವಾಗಿದ್ದ 2010ರ ದೆಹಲಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ವ್ಯಾಪಕ ಭ್ರಷ್ಟಾಚಾರ ಎಸಗಿದ ಆರೋಪದ ಮೇರೆಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ (ಐಒಎ) ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದ ಸುರೇಶ್ ಕಲ್ಮಾಡಿ ಅವರನ್ನು ಐಒಎ ಮಹಾ ಪೋ ಅಧ್ಯಕ್ಷರನ್ನಾಗಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಅವರೊಂದಿಗೆ ಅಭಯ್ ಸಿಂಗ್ ಚೌಟಾಲಾ ಅವರನ್ನೂ ಐಒಎ ಅಜೀವ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆದರೆ ಇವರಿಬ್ಬರ ನೇಮಕಕ್ಕೆ ಸಾಮಾಜಿಕ ಜಾಲತಾಣವಾದ ಟ್ವೀಟರ್ನಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಕಲ್ಮಾಡಿಗೆ ಅಚ್ಛೇದಿನ್ ಪ್ರಾರಂಭವಾಗಿವೆ ಎಂದು ಕೆಲವರು ಕೇಂದ್ರ ಸರ್ಕಾರವನ್ನು ಕಿಚಾಯಿಸಿದ್ದಾರೆ.
ಕಲ್ಮಾಡಿ ಆಯ್ಕೆ ನಮಗೆ ನಿಜಕ್ಕೂ ಆಘಾತ ತರಿಸಿದೆ ಎಂದು ಕ್ರೀಡಾ ಸಚಿವ ವಿಜಯ್ ಗೋಯಲ್ ಪ್ರತಿಕ್ರಿಯಿಸಿದ್ದಾರೆ.
