ತಾವು ಮನೆಯಲ್ಲಿ ಕಷ್ಟಪಟ್ಟು ಕೂಡಿಟ್ಟ ಹಣ ಇನ್ಮುಂದೆ ಉಪಯೋಗಕ್ಕಿಲ್ಲವೆಂದು ಮಹಿಳೆ ತಪ್ಪಾಗಿ ಅರ್ಥೈಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ನವದೆಹಲಿ (ನ.11): ಕೇಂದ್ರ ಸರ್ಕಾರದ ನೋಟು ನಿಷೇಧದ ಕ್ರಮಕ್ಕೆ 3 ಜೀವಗಳು ಬಲಿಯಾಗಿರುವ ಘಟನೆ ದೇಶದ ಬೇರೆ ಬೇರೆ ಕಡೆಗಳಿಂದ ವರದಿಯಾಗಿದೆ.

Add Asianetnews Kannada as a Preferred SourcegooglePreferred

ಕೇಂದ್ರ ಸರ್ಕಾರ ರೂ.500 ಹಾಗೂ ರೂ.1000 ನೋಟುಗಳನ್ನು ನಿಷೇಧಿಸಿರುವ ಸುದ್ದಿ ತಿಳಿದು ತೆಲಂಗಾಣದ ಶನಿಗಾಪುರಮ್ ಗ್ರಾಮದ 55 ವರ್ಷದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಾವು ಮನೆಯಲ್ಲಿ ಕಷ್ಟಪಟ್ಟು ಕೂಡಿಟ್ಟ ಹಣ ಇನ್ಮುಂದೆ ಉಪಯೋಗಕ್ಕಿಲ್ಲವೆಂದು ಮಹಿಳೆ ತಪ್ಪಾಗಿ ಅರ್ಥೈಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

ಅದೇ ರೀತಿ, ನೋಟು ನಿಷೇಧದ ಸುದ್ದಿಯಿಂದ ಆಘಾತಕ್ಕೊಳಗಾಗಿ ಉತ್ತರಪ್ರದೇಶದ ಗೋರಕ್’ಪುರದಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ತಾನು ಕೂಡಿಟ್ಟ ರೂ.2000 ಚಿಲ್ಲರೆ ಹಣದ ಬದಲಾಗಿ ರೂ.1000ದ ಎರಡು ನೋಟುಗಳನ್ನು ಆಕೆ ಇತ್ತೀಚೆಗಷ್ಟೇ ಪಡೆದುಕೊಂಡಿದ್ದು, ನೋಟು ರದ್ದು ಪಡಿಸಲಾಗಿರುವ ಸುದ್ದಿ ಕೇಳಿ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾಳೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮಾಹುವಾ ಮಾಫಿ ಗ್ರಾಮದಲ್ಲಿ ಚಿಕಿತ್ಸೆಗಾಗಿ ರೂ.500, ರೂ1000ಯೇತರ ನೋಟುಗಳ ವ್ಯವಸ್ಥೆ ಮಾಡುವಲ್ಲಿ ಆದ ವಿಳಂಬದಿಂದ 8 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.