Asianet Suvarna News Asianet Suvarna News

ಟಿಟಿಡಿ ವಿಶ್ವಸ್ಥ ಮಂಡಳಿ ಸದಸ್ಯರಾಗಿ ಸುಧಾ ಮೂರ್ತಿ ನೇಮಕ

ಬೆಂಗಳೂರು (ಫೆ.11): ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರನ್ನು ತಿರುಮಲ ತಿರುಪತಿ ದೇವಸ್ವಂ ಟಿಟಿಡಿ ವಿಶ್ವಸ್ಥ ಮಂಡಳಿ ಸದಸ್ಯರಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇಮಿಸಿದ್ದಾರೆ.

Sudha Murthy Appointed As TTD Member

ಬೆಂಗಳೂರು (ಫೆ.11): ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ ಸುಧಾ ಮೂರ್ತಿ ಅವರನ್ನು ತಿರುಮಲ ತಿರುಪತಿ ದೇವಸ್ವಂ ಟಿಟಿಡಿ ವಿಶ್ವಸ್ಥ ಮಂಡಳಿ ಸದಸ್ಯರಾಗಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇಮಿಸಿದ್ದಾರೆ.

ಕೋಟ್ಯಂತರ ರೂಪಾಯಿ ಕಪ್ಪುಹಣ ಹೊಂದಿದ್ದ ಆರೋಪದಡಿ ಇತ್ತೀಚೆಗೆ ಬಂಧನಕ್ಕೊಳಗಾದ ಶೇಖರ್‌ ರೆಡ್ಡಿ ಸ್ಥಾನವನ್ನು ಸುಧಾ ಮೂರ್ತಿ ತುಂಬಲಿದ್ದಾರೆ.

ಟಿಟಿಡಿ ಸದಸ್ಯರನ್ನಾಗಿ ನೇಮಕವಾಗಿದ್ದ ಚೆನ್ನೈನಲ್ಲಿ ರೆಡ್ಡಿ ಬಂಧನ ಚಂದ್ರಬಾಬು ಪಾಲಿಗೆ ಕಪ್ಪುಚುಕ್ಕೆಯಾಗಿ ಕಾಡುತ್ತಿತ್ತು. ವಿವಿಧ ಸ್ಥಾನಗಳಿಗೆ ಚಂದ್ರಬಾಬು ನಾಯ್ಡು ನೇಮಿಸಿದ ಬಹುತೇಕ ವ್ಯಕ್ತಿಗಳು ಇದೇ ರೀತಿ ವಿವಾದಕ್ಕೀಡಾಗಿದ್ದರು. ಇದೀಗ ಕಳಂಕ ರಹಿತ ಸುಧಾಮೂರ್ತಿ ನೇಮಕದ ಮೂಲಕ ಈ ಆಪಾದನೆಯಿಂದ ಚಂದ್ರಬಾಬು ತಪ್ಪಿಸಿಕೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ಮಾನವತಾವಾದಿ, ಸಮಾಜ ಸೇವಕಿ ಸುಧಾ ಮೂರ್ತಿ ಅವರ ಆಯ್ಕೆಗೆ ಹಲವು ವಲಯಗಳಿಂದ ಪ್ರಶಂಸೆಯೂ ವ್ಯಕ್ತವಾಗಿದೆ.

 

Follow Us:
Download App:
  • android
  • ios