ಬೀದರ್​ನಲ್ಲೊಬ್ಬ ಟೈಟ್​ ಮಾಸ್ತರ್​ | ಶಾಲೆ ಗುಂಡು ಹೊಡೆದು ಬರ್ತಾನೆ ಈ ಶಿಕ್ಷಕ !ಪಾಠ ಹೇಳಲ್ಲ.. ಬಾಯಿಗೆ ಬಂದಂತೆ ಬೈತಾನೆ! ಮಕ್ಕಳ ಮುಂದೆ ಅವಾಚ್ಯವಾಗಿ ಮಾತಾಡುವ ಶಿಕ್ಷಕಕುಡಿದ ಮತ್ತಿನಲ್ಲಿ ಊರವರಿಗೆಲ್ಲಾ ಬೈತಾನೆ ! ಗೂಂಡಾಗಳನ್ನು ಕರೆಸ್ತೀನಿ ಅಂತ ಆವಾಜ್​ಶಿಕ್ಷಕ ರಾಮಚಂದ್ರ ವರ್ತನೆಯಿಂದ ಬೇಸತ್ತ ಮಕ್ಕಳು |ಕುಡುಕ ಶಿಕ್ಷಕನ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ 

ಬೀದರ್: ಇಲ್ಲೊಬ್ಬ ಮೇಸ್ಟ್ರು ಶಾಲೆಗೆ ಕಂಠಪೂರ್ತಿ ಕುಡಿದು ತೂರಾಡುತ್ತಾ ಬರ್ತಾನೆ, ಶಾಲೆಗೆ ಬಂದು ಪಾಠ ಹೇಳಲ್ಲ. ಮಕ್ಕಳ ಮುಂದೆ ಬಾಯಿಗೆ ಬಂದಂತೆ ಮಾತಾಡ್ತಾನೆ. ಸ್ಕೂಲ್​’ಗೆ ಬಂದು ಊರವರ ಹೆಸ್ರು ಹೇಳ್ಕೊಂಡು ಬೈತಾನೆ.

ಹೆಚ್ಚಿಗೆ ಮಾತಾಡಿದ್ರೆ ಗೂಂಡಾಗಳನ್ನು ಕರೆಸ್ತೀನಿ ಅಂತ ಆವಾಜ್​ ಹಾಕ್ತಾನೆ. ಹೌದು, ಬೀದರ್​ ಜಿಲ್ಲೆಯ ಔರಾದ್​ ತಾಲೂಕಿನ ನಿಟ್ಟೂರು ಸರ್ಕಾರಿ ಶಾಲೆ ಶಿಕ್ಷಕ ರಾಮಚಂದ್ರನ ವರ್ತನೆಯಿಂದ ಶಾಲೆ ಮಕ್ಕಳು ಮಾತ್ರವಲ್ಲ ಇಡೀ ಊರವರೇ ಬೇಸತ್ತು ಹೋಗಿದ್ದಾರೆ.

ಈ ಕುಡುಕ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳಿ ಅಂತ ದೂರು ಕೊಟ್ರೆ ಅಧಿಕಾರಿಗಳು ಮೌನವಾಗಿದ್ದಾರೆ ಅನ್ನೋದು ಗ್ರಾಮಸ್ಥರ ಆರೋಪ.

ನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ಮಾತನಾಡುವ ಶಿಕ್ಷಕ ರಾಮಚಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಒತ್ತಾಯಿಸಿದ್ದಾರೆ.