ಇವಿಎಂ ಬೇಡ ಎಂದು ಅಳುವ ಬದಲು ಜನಾದೇಶ ಒಪ್ಪಿಕೊಳ್ಳಿ: ಬಿಜೆಪಿ
ಇವಿಎಂ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಅಳುವ ಬದಲು ಉತ್ತರ ಪ್ರದೇಶ ಜನರ ಜನಾದೇಶವನ್ನು ಒಪ್ಪಿಕೊಳ್ಳಿ ಎಂದು ಅಖಿಲೇಶ್ ಯಾದವ್ ಗೆ ಬಿಜೆಪಿ ಹೇಳಿದೆ.
ಲಕ್ನೋ (ಏ.15): ಇವಿಎಂ ಮಷಿನ್ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಅಳುವ ಬದಲು ಉತ್ತರ ಪ್ರದೇಶ ಜನರ ಜನಾದೇಶವನ್ನು ಒಪ್ಪಿಕೊಳ್ಳಿ ಎಂದು ಅಖಿಲೇಶ್ ಯಾದವ್ ಗೆ ಬಿಜೆಪಿ ಹೇಳಿದೆ.
ಇವಿಎಂ ಮಷಿನ್ ಬೇಡ, ಬ್ಯಾಲೆಟ್ ಪೇಪರ್ ಯಿಂದ ಚುನಾವಣೆ ನಡೆಸಿ ಎಂದು ಒತ್ತಾಯಿಸಿರುತ್ತಿರುವ ಅಖಿಲೇಶ್ ಯಾದವ್ ಗೆ ಬಿಜೆಪಿ ಪ್ರತ್ಯುತ್ತರ ನೀಡಿದೆ. ಅಖಿಲೇಶ್ ಗೆ ಇವಿಎಂ ಯಂತ್ರಗಳ ಮೇಲೆ, ಉತ್ತರ ಪ್ರದೇಶ ಜನರ ಜನಾದೇಶದ ಮೇಲೆ ನಂಬಿಕೆ ಇಲ್ಲ. ಅಷ್ಟೇ ಅಲ್ಲ ಸ್ವತಃ ಅವರ ತಂದೆಯ ಮೇಲೆ ನಂಬಿಕೆಯಿಲ್ಲ ಎಂದು ಬಿಜೆಪಿ ಹೇಳಿದೆ.