Asianet Suvarna News Asianet Suvarna News

ವಿಧಾನಸಭೆಗೆ ಶ್ರೀರಾಮಲು ಸ್ಪರ್ಧೆ ಖಚಿತ?

ಶ್ರೀರಾಮಲುಗೆ ಟಿಕೇಟ್ ನೀಡದೆ ಇದ್ದಲ್ಲಿ ಬಳ್ಳಾರಿಯಲ್ಲಿ ಬಿಜೆಪಿಗೆ ಹೊಡೆತ ಎಂದರಿತ ಬೆಜಿಪಿ ಹೈಕಮಾಂಡ್  ಶ್ರೀರಾಮಲುಗೆ ಟಿಕೆಟ್ ನೀಡಲು  ಒಲವು ತೋರಿಸಿದೆ. 

Sriramulu may contest to Assembly Election

ಬೆಂಗಳೂರು (ಏ. 04):  ಶ್ರೀರಾಮಲುಗೆ ಟಿಕೇಟ್ ನೀಡದೆ ಇದ್ದಲ್ಲಿ ಬಳ್ಳಾರಿಯಲ್ಲಿ ಬಿಜೆಪಿಗೆ ಹೊಡೆತ ಎಂದರಿತ ಬೆಜಿಪಿ ಹೈಕಮಾಂಡ್  ಶ್ರೀರಾಮಲುಗೆ ಟಿಕೆಟ್ ನೀಡಲು  ಒಲವು ತೋರಿಸಿದೆ. 

ಕೂಡ್ಲಿಗಿಯಿಂದಲೂ ರಾಮುಲು ಸ್ಪರ್ಧೆಗೆ  ಒತ್ತಡ ಹೆಚ್ಚಿದೆ.  ಕಾಂಗ್ರೆಸ್ ಸೇರಿದ ನಾಗೇಂದ್ರ ಸೋಲಿಸಲು ರಾಮುಲು ಅವರೇ ಸರಿ.  ಸಂಡೂರು ಆಥವಾ ಕೂಡ್ಲಿಗಿಯಲ್ಲೇ ಸ್ಪರ್ಧಿಸಲಿ ಎಂದು  ಬಳ್ಳಾರಿ  ಕ್ಷೇತ್ರದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.  ರಾಮುಲು ಸಹೋದರಿ ಮಾಜಿ ಸಂಸದೆ ಜೆ.ಶಾಂತಾ, ಮಾಜಿ ಸಂಸದ ಸಣ್ಣ ಫಕೀರಪ್ಪ ಕೂಡ ಪೈಪೋಟಿ ನೀಡಲಿದ್ದಾರೆ.  ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸಣ್ಣ ಫಕೀರಪ್ಪ,ಜೆ. ಶಾಂತಾ ಹೆಸರು,  ಸಂಡೂರು, ಕೂಡ್ಲಿಗಿ  ಕ್ಷೇತ್ರದಿಂದ ರಾಮುಲು ಹೆಸರು ಕೇಳಿ ಬರುತ್ತಿದೆ.  ಕುತೂಹಲ ಮೂಡಿಸಿದೆ  ಬಳ್ಳಾರಿ ಬ್ಯಾಟಲ್ ಫೀಲ್ಡ್!
 

Follow Us:
Download App:
  • android
  • ios