ಮಂಜುನಾಥ್ ಮನೆ ಎದುರು ನಾಗರಹಾವೊಂದು ಕಾಣಿಸಿಕೊಂಡಿತು. ಕೂಡಲೇ ಮಂಜುನಾಥ್ ಹಾವು ಹಿಡಿಯುವ ಉರಗ ತಜ್ಞ ಶೇಷಪ್ಪ ಎಂಬುವರಿಗೆ ದೂರವಾಣಿ ಕರೆ ಮಾಡಿ ಸುದ್ದಿ ತಿಳಿಸಿದರು. ಶೇಷಪ್ಪ ಸ್ಥಳಕ್ಕೆ ಹೋಗಿ ನೋಡಿದಾಗ ನಾಗರ ಹಾವಿನ ಹೊಟ್ಟೆ ಉಬ್ಬಿತ್ತು. ನಂತರ ನಾಗರಹಾವನ್ನು ಬಯಲಿಗೆ ತಂದಾಗ ನುಂಗಿದ್ದ ಹಾವನ್ನು ಹೊರ ಹಾಕಿತು. ನಾಗರಹಾವು ಹೊರಹಾಕಿದ ಕೊಳಕುಮಂಡಲ ಹಾವು ಸತ್ತುಹೋಗಿತ್ತು. ಸುಮಾರು 15 ವರ್ಷದ ನಾಗರ ಹಾವು, ಕೊಳಕು ಮಂಡಲ ಹಾವನ್ನೇ ನುಂಗಿದ್ದ ವಿಷಯ ಗೊತ್ತಾದ ಮೇಲೆ ನೆರೆಹೊರೆಯವರು ಆ ದೃಶ್ಯಗಳನ್ನು ನೋಡಲು ಧಾವಿಸಿ ಬಂದರು
ಹಾಸನ(ಡಿ.27): ಕಪ್ಪೆಯನ್ನು ಹಾವು ನುಂಗುವುದು ಸಾಮಾನ್ಯ. ಆದರೆ, ಹಾಸನದಲ್ಲಿ ಹಾವನ್ನೇ ಹಾವು ನುಂಗಿದ ಪ್ರಸಂಗ ನಡೆದಿದೆ. ಹಾಸನದ ಡೆಂಟಲ್ ಕಾಲೇಜು ಬಳಿ ಇರುವ ಮಂಜುನಾಥ್ ಎಂಬುವರರ ಮನೆ ಎದುರು ಹಾವು ಹಾವನ್ನೇ ನುಂಗಿದ ಪ್ರಸಂಗ ಬೆಳಕಿಗೆ ಬಂದಿದೆ.
ಮಂಜುನಾಥ್ ಮನೆ ಎದುರು ನಾಗರಹಾವೊಂದು ಕಾಣಿಸಿಕೊಂಡಿತು. ಕೂಡಲೇ ಮಂಜುನಾಥ್ ಹಾವು ಹಿಡಿಯುವ ಉರಗ ತಜ್ಞ ಶೇಷಪ್ಪ ಎಂಬುವರಿಗೆ ದೂರವಾಣಿ ಕರೆ ಮಾಡಿ ಸುದ್ದಿ ತಿಳಿಸಿದರು. ಶೇಷಪ್ಪ ಸ್ಥಳಕ್ಕೆ ಹೋಗಿ ನೋಡಿದಾಗ ನಾಗರ ಹಾವಿನ ಹೊಟ್ಟೆ ಉಬ್ಬಿತ್ತು. ನಂತರ ನಾಗರಹಾವನ್ನು ಬಯಲಿಗೆ ತಂದಾಗ ನುಂಗಿದ್ದ ಹಾವನ್ನು ಹೊರ ಹಾಕಿತು. ನಾಗರಹಾವು ಹೊರಹಾಕಿದ ಕೊಳಕುಮಂಡಲ ಹಾವು ಸತ್ತುಹೋಗಿತ್ತು. ಸುಮಾರು 15 ವರ್ಷದ ನಾಗರ ಹಾವು, ಕೊಳಕು ಮಂಡಲ ಹಾವನ್ನೇ ನುಂಗಿದ್ದ ವಿಷಯ ಗೊತ್ತಾದ ಮೇಲೆ ನೆರೆಹೊರೆಯವರು ಆ ದೃಶ್ಯಗಳನ್ನು ನೋಡಲು ಧಾವಿಸಿ ಬಂದರು
