ಕಡಿದ ಹಾವಿಗೆ ಕಚ್ಚಿ ಕೊಂದ : ಆತನೂ ಸಾವಿಗೀಡಾದ
ಕಚ್ಚಿದ ಹಾವಿಗೆ ತಿರುಗಿ ಕಚ್ಚಿಸಿ ಸಾಯಿಸಿದ ವ್ಯಕ್ತಿ ತಾನೂ ಸಾವಿಗೀಡಾಗಿದ್ದಾನೆ.
ಗಾಂಧಿನಗರ [ಜು.17] : ಇಲ್ಲಿನ ಮಹಿಶ್ ಗರ್ ಪ್ರದೇಶದಲ್ಲಿ ವ್ಯಕ್ತಿಯೋರ್ವ ಹಾವು ಕಡಿತದಿಂದ ಸಾವಿಗಾಡಿದ್ದು, ಸಾಯುವ ಮುನ್ನ ಹಾವನ್ನೂ ಕಡಿದು ಸಾಯಿಸಿದ್ದಾನೆ.
ಶನಿವಾರ ಮಧ್ಯಾಹ್ನದ ವೇಳೆ ವಡೋದರದಿಂದ 120 ಕಿ.ಮೀ ದೂರದಲ್ಲಿರುವ ಅಜನ್ವಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಪರ್ವತ್ ಗಾಲಾ ಬರಿಯಾ ಹೊಲದಲ್ಲಿ ನಿಂತಿದ್ದ ವೇಳೆ ಸ್ಥಳದಲ್ಲಿಯೇ ಇದ್ದ ಹಾವೊಂದು ಕಡಿದಿದೆ. ಬಳಿಕ ಅದನ್ನು ಹಿಡಿದು ತಿರುಗಿ ಕಡಿದು ಸಾಯಿಸಿದ್ದಾನೆ.
ಈ ವೇಳೆ ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಒಂದು ದಿನದ ಬಳಿಕ ಮೃತಪಟ್ಟಿದ್ದಾನೆ. ಈ ಸಂಬಂಧ ಅಜನ್ವಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.