ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ  ಉಂಟಾಗಿತ್ತು. ಅಲ್ಲದೇ ಇಲ್ಲಿ  ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ದೇವನಹಳ್ಳಿ(ನ.28): ಇಂದು ಮುಂಜಾನೆ ಬೆಂಗಳೂರು ಏರ್​​​ಪೋರ್ಟ್​ ಸುತ್ತಮುತ್ತ ದಟ್ಟವಾದ ಮಂಜು ಕವಿದ ವಾತಾವರಣವಿತ್ತು. ಭಾರೀ ಮಂಜು ಕವಿದಿದ್ದರಿಂದ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಬೇಕಿದ್ದ 20ಕ್ಕೂ ಅಧಿಕ ವಿಮಾನಗಳ ಹಾರಟದ ಸಮಯದಲ್ಲಿ ವ್ಯತ್ಯಯ ಉಂಟಾಗಿ ಮಾರ್ಗ ಬದಲಾವಣೆ ಮಾಡಿರುವ ಘಟನೆಯು ನಡೆಯಿತು.

 ಮುಂಜಾನೆ 4:30 ರಿಂದ ವಿಮಾನಗಳ ಲ್ಯಾಡಿಂಗ್ ಮತ್ತು ಟೇಕಾಫ್​​ನ ವೇಳೆ ಭಾರೀ ವ್ಯತ್ಯಯ ಉಂಟಾಗಿತ್ತು. ಅಲ್ಲದೇ ಇಲ್ಲಿ ದಟ್ಟ ಮಂಜು ಕವಿದಿದ್ದರಿಂದ ಬೈಕ್​ ಸವಾರರ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇದರಿಂದ ಪ್ರಯಾಣಿಕರು ಕೆಲಕಾಲ ಆತಂಕಕ್ಕೆ ಒಳಗಾಗಬೇಕಾಯಿತು.