ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಖಚಿತವಾದರೂ, ಸಾವು ಯಾವ ರೂಪದಲ್ಲಿ ಬರಬಹುದೆಂಬುದನ್ನು ಯಾರೊಬ್ಬರೂ ಊಹಿಸಲಾರರು. ಆದರೆ ಕೆಲವರು ತಮ್ಮ ಸಾವಿನ ಬಗ್ಗೆ ತಾವೇ ಆಡಿಕೊಂಡ ಮಾತುಗಳು ಕೆಲವೊಮ್ಮೆ ಅವರ ಸಾವಿನ ಸಂದರ್ಭ ಆಪ್ತರಲ್ಲಿ ಸಾಕಷ್ಟುನೋವನ್ನು ತರುವುದಿದೆ. ಅಂತಹುದೇ ಒಂದು ಸನ್ನಿವೇಶ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 32ರ ಹರೆಯದ ಪೊಲೀಸ್‌ ಅಧಿಕಾರಿ ಫಿರೋಜ್‌ ಅಹ್ಮದ್‌ ದಾರ್‌ ಅವರ ವಿಷಯದಲ್ಲಿ ಸೃಷ್ಟಿಯಾಗಿದೆ.
ನವದೆಹಲಿ(ಜೂ.18): ಹುಟ್ಟಿದ ಪ್ರತಿಯೊಂದು ಜೀವಿಗೂ ಸಾವು ಖಚಿತವಾದರೂ, ಸಾವು ಯಾವ ರೂಪದಲ್ಲಿ ಬರಬಹುದೆಂಬುದನ್ನು ಯಾರೊಬ್ಬರೂ ಊಹಿಸಲಾರರು. ಆದರೆ ಕೆಲವರು ತಮ್ಮ ಸಾವಿನ ಬಗ್ಗೆ ತಾವೇ ಆಡಿಕೊಂಡ ಮಾತುಗಳು ಕೆಲವೊಮ್ಮೆ ಅವರ ಸಾವಿನ ಸಂದರ್ಭ ಆಪ್ತರಲ್ಲಿ ಸಾಕಷ್ಟುನೋವನ್ನು ತರುವುದಿದೆ. ಅಂತಹುದೇ ಒಂದು ಸನ್ನಿವೇಶ ಶುಕ್ರವಾರ ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ 32ರ ಹರೆಯದ ಪೊಲೀಸ್ ಅಧಿಕಾರಿ ಫಿರೋಜ್ ಅಹ್ಮದ್ ದಾರ್ ಅವರ ವಿಷಯದಲ್ಲಿ ಸೃಷ್ಟಿಯಾಗಿದೆ.
