ಸ್ಕೈಬಾರ್  ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್​​ಗೆ ಕಂಟಕ ​​​​ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್​ನಿಂದ ಇಂದು ಕೋರ್ಟ್​​ಗೆ ಹಾಜರಾಗುವಂತೆ ಕಾಶಪ್ಪನವರ್​ಗೆ ವಾರಂಟ್​​​​ ಜಾರಿಗೊಳಿಸಲಾಗಿದೆ.

ಬೆಂಗಳೂರು (ಡಿ. 29): ಸ್ಕೈಬಾರ್ ಗಲಾಟೆ ಪ್ರಕರಣದಲ್ಲಿ ಶಾಸಕ ವಿಜಾಯಾನಂದ ಕಾಶಪ್ಪನವರ್​​ಗೆ ಕಂಟಕ ​​​​ಶುರುವಾಗಿದೆ. 1ನೇ ಎಸಿಎಂಎಂ ಕೋರ್ಟ್​ನಿಂದ ಇಂದು ಕೋರ್ಟ್​​ಗೆ ಹಾಜರಾಗುವಂತೆ ಕಾಶಪ್ಪನವರ್​ಗೆ ವಾರಂಟ್​​​​ ಜಾರಿಗೊಳಿಸಲಾಗಿದೆ.

ಪ್ರಕರಣದ ಹಿನ್ನೆಲೆ

2014ರ ಜುಲೈ 1 ರ ರಾತ್ರಿ ಯುಬಿ ಸಿಟಿಯ ಸ್ಕೈಬಾರ್​ನಲ್ಲಿ ಕುಟುಂಬ ಸಮೇತ ಪಾರ್ಟಿ ಮಾಡಿದ್ದ ಶಾಸಕ ಕಾಶಪ್ಪನವರ್ ಗಲಾಟೆ ನಡೆಸಿದ್ದರು. ರಾತ್ರಿ 1 ಗಂಟೆಯ ನಂತರವೂ ಬಾರ್​ನಲ್ಲಿ ಶಾಸಕ ಮತ್ತವರ ಪಟಾಲಂ ಅವಧಿ ಮೀರಿದ ನಂತರವೂ ಕುಳಿತಿದ್ದರು. ಅವಧಿ ಮೀರಿದ ನಂತರ ಹೋಟೆಲ್​ ತೆರೆದಿದ್ದನ್ನು ನೋಡಿ ಕಬ್ಬನ್​​ ಪಾರ್ಕ್​​​ ಠಾಣೆ ಪೇದೆಗಳಾದ ಕಿರಣ್​​ ಹಾಗೂ ಪ್ರಶಾಂತ ನಾಯ್ಕ್​​​ ಪ್ರಶ್ನಿಸಿದ್ದರು. ಇದೇ ವೇಳೆ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಸಿ, ಬೂಟ್​​ ತೋರಿಸಿ ಶಾಸಕ ಕಾಶಪ್ಪನವರ್​ ಹಲ್ಲೆ ನಡೆಸಿದ್ದರು.

ಅಧಿಕಾರ ಗತ್ತು ತೋರಿಸಿ, ರೌಡಿಶೀಟರ್​ನಿಂದ ಪೊಲೀಸರಿಗೆ ಹಲ್ಲೆ ನಡೆಸಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಬಿ ಪೊಲೀಸರು ಸಲ್ಲಿಸಿರುವ ಚಾರ್ಜ್​ ಶೀಟ್​​ ಪ್ರತಿ ಸುವರ್ಣ ನ್ಯೂಸ್​​ಗೆ ಲಭ್ಯವಾಗಿದೆ.