Asianet Suvarna News Asianet Suvarna News

ಈಗಲೂ ನನಗೆ ಈ ವಿಚಾರ ದಿಗ್ಭ್ರಮೆ ಉಂಟು ಮಾಡುತ್ತದೆ : ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ವಿಧಾನಸಭಾ ಚುನಾವಣಾ ದಿನಗಳನ್ನು ನೆನೆಸಿಕೊಂಡಿದ್ದಾರೆ. ಹಿಂದಿನ ಯಾವ ಸರ್ಕಾರಗಳೂ ಮಾಡದಷ್ಟು ಕೆಲಸ ಮಾಡಿದ್ದರೂ ಸಹ  ಹೇಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೂಲು ಕಂಡೆ ಎನ್ನುವುದು ಈಗಲೂ ಅಚ್ಚರಿ ಉಂಟು ಮಾಡುತ್ತಿದೆ ಎಂದಿದ್ದಾರೆ. 

Siddaramaiah Remembered Chamundeshwari Constituency Seat Defeat
Author
Bengaluru, First Published Dec 5, 2018, 12:38 PM IST

ದಾವ​ಣ​ಗೆರೆ/ಹರ​ಪ​ನ​ಹ​ಳ್ಳಿ: ಜನತೆ ಯಾವು​ದಕ್ಕೆ ವೋಟು ಕೊಡ್ತಾರೆ ಅಂತಾನೇ ಅರ್ಥ​ವಾ​ಗು​ತ್ತಿಲ್ಲ. ನನ್ನನ್ನೇ ಚಾಮುಂಡಿ ಕ್ಷೇತ್ರ​ದಲ್ಲಿ ಸೋಲಿ​ಸಿದ್ರು. ನಾನು ಸೋಲು​ತ್ತೇ​ನೆಂದು ಕನ​ಸಿ​ನಲ್ಲೂ ಅಂದು​ಕೊಂಡಿ​ರ​ಲಿಲ್ಲ ಎಂದು ಮಾಜಿ ಸಿಎಂ ಸಿದ್ದ​ರಾ​ಮಯ್ಯ ಹೇಳಿ​ದರು.

ಬಹುಶಃ ನನಗೆ ಅನಿ​ಸುತ್ತೆ ರಾಜ್ಯದ ಇತಿ​ಹಾ​ಸ​ದಲ್ಲಿ ನಮ್ಮ ಸರ್ಕಾ​ರ​ದಷ್ಟುಅಭಿ​ವೃದ್ಧಿ ಕೆಲಸ ಬೇರಾ​ವುದೇ ಸರ್ಕಾ​ರ ಮಾಡಿ​ರ​ಲಿಲ್ಲ. ಸಿಎಂ ಆಗಿ ಅಷ್ಟೇ ಅಲ್ಲ, 1994ರಲ್ಲಿ ಹಣ​ಕಾಸು ಸಚಿ​ವನಾಗಿ, 13 ಸಲ ಬಜೆಟ್‌ ಮಂಡಿಸಿ, 5 ಮುಖ್ಯಮಂತ್ರಿ​ಗ​ಳಡಿ ಕೆಲಸ ಮಾಡಿ​ದವನು ನಾನು. ರಾಮ​ಕೃಷ್ಣ ಹೆಗಡೆ, ಎಚ್‌.​ಡಿ.ದೇವೇ​ಗೌಡ, ಎಸ್‌.​ಆ​ರ್‌.​ಬೊ​ಮ್ಮಾಯಿ, ಜೆ.ಎ​ಚ್‌.​ಪ​ಟೇಲ್‌, ಧರಂ ಸಿಂಗ್‌ ಸರ್ಕಾ​ರ​ದ​ಲ್ಲಿ ಕೆಲಸ ಮಾಡಿದ್ದೆ ಎಂದು ತಿಳಿ​ಸಿ​ದರು.

ಅಷ್ಟೊಂದು ಬಜೆಟ್‌ ಮಂಡಿ​ಸಿದ್ದ ನಾನು ಹಣ​ಕಾಸು ಸಚಿ​ವ​ನಾ​ಗಿ​ದ್ದಾಗ ಕೊಡ​ಲಾ​ಗ​ದಷ್ಟುಅನು​ದಾನ ರಾಜ್ಯ​ದ ಮುಖ್ಯ​ಮಂತ್ರಿ​ಯಾಗಿ ಕೊಟ್ಟಿ​ದ್ದೇನೆ. ಕಳೆದ ಚುನಾ​ವ​ಣೆ​ಯಲ್ಲಿ ಚಾಮುಂಡಿ ಕ್ಷೇತ್ರ​ದಲ್ಲಿ ಸೋಲು​ತ್ತೇ​ನೆಂದು ಕನಸು ಮನ​ಸಿ​ನಲ್ಲೂ ಅಂದು​ಕೊಂಡಿ​ರ​ಲಿಲ್ಲ. ರಿಸ​ಲ್ಟ್‌ ದಿನ ನೋಡ್ತೀನಿ ದಿಗ್ಭ್ರಮೆ ಆಗು​ತ್ತಿದೆ. ಚಾಮುಂಡಿಯಲ್ಲಿ ನನ್ನ ಎದು​ರಾಳಿ, ವಿರೋ​ಧಿ ನೋಡ್ತಿ​ದ್ದಾನೆ. ಆ ಸೋಲನ್ನು ನಂಬು​ವು​ದಕ್ಕೂ ಆಗ​ದಂತಾ​ಗಿತ್ತು. ಇಷ್ಟೆಲ್ಲಾ ಕೆಲಸ ಮಾಡಿ​ದ್ದೀನಿ, ಹೇಗೆ ಸೋತೆ ಅಂತಾ ಈಗಲೂ ದಿಗ್ಭ್ರ​ಮೆ​ಯಾ​ಗು​ತ್ತದೆ ಎಂದು ಅವರು ಹೇಳಿ​ದ​ರು.

ಅದೃ​ಷ್ಟಕ್ಕೆ ಬಾದಾಮಿ ಕ್ಷೇತ್ರ ನನ್ನ ಕೈ ಹಿಡಿ​ಯಿತು. ಚುನಾ​ವಣೆ ಮುಂಚೆಗೆ ಎಲ್ಲವೂ ಚನ್ನಾ​ಗಿಯೇ ಇತ್ತು. ಆದರೆ ಫಲಿ​ತಾಂಶ ಬಂದಾ​ಗಲೇ ದಿಗ್ಭ್ರ​ಮೆ​ಯಾ​ಯಿತು. ಹರ​ಪ​ನ​ಹ​ಳ್ಳಿ​ಯಲ್ಲಿ ಎಂ.ಪಿ.ರವೀಂದ್ರ ಸೋಲ​ನು​ಭ​ವಿ​ಸಿದ್ದು ಹೀಗೆ ಇದೆ​ಲ್ಲ​ವನ್ನೂ ನೋಡಿ​ದರೆ ಜನತೆ ಯಾವು​ದಕ್ಕೆ ವೋಟು ಕೊಡ್ತಾರೆ ಅಂತಾನೇ ಅರ್ಥ​ವಾ​ಗು​ತ್ತಿಲ್ಲ ಎಂದು ಮಾರ್ಮಿ​ಕ​ವಾಗಿ ಹೇಳಿ​ದರು.

ಹರ​ಪ​ನ​ಹಳ್ಳಿ ಪಟ್ಟ​ಣ​ದಲ್ಲಿ ಮಂಗ​ಳ​ವಾರ ಮಾಜಿ ಶಾಸಕ ಎಂ.ಪಿ.​ರ​ವೀಂದ್ರರವ​ರಿಗೆ ನುಡಿ-ನಮನ ಕಾರ್ಯ​ಕ್ರ​ಮ​ದಲ್ಲಿ ಪಾಲ್ಗೊಂಡಿದ್ದ ಅವರು, ಕ್ಷೇತ್ರದ ಜನತೆ ಒಮ್ಮೆ ಏಕೆ ಹೀಗಾ​ಯಿ​ತೆಂದು ತಮಗೆ ತಾವೇ ಪ್ರಶ್ನೆ ಹಾಕಿ​ಕೊಂಡು, ಹೀಗೆ ಆಗ​ದಂತೆ ನೋಡಿ​ಕೊಳ್ಳಿ. ಅದೇ ನೀವುಗಳು ಈ ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ ನೀಡಿದ ದಿವಂಗತ ಎಂ.ಪಿ.ರವೀಂದ್ರಗೆ ಸಲ್ಲಿ​ಸು​ವಂತಹ ಗೌರ​ವ​ವಾ​ಗಿ​ರು​ತ್ತದೆ ಎಂದು ಮನವಿ ಮಾಡಿದರು.

Follow Us:
Download App:
  • android
  • ios