Asianet Suvarna News Asianet Suvarna News

`ಕೆಆರ್​​​​​ಎಸ್​​ ಕಟ್ಟಲು ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ನಾವೇ ಬಲಿಪಶುಗಳಾಗುತ್ತಿದ್ದೇವೆ'

ಡ್ಯಾಮ್ ಕಟ್ಟಿದೋರು ನಾವು. ಆದರೆ, ನಮ್ಮನ್ನ ಕಾವೇರಿ ವಿಚಾರದಲ್ಲಿ ವಿಲನ್ ಥರಾ ನೋಡುತ್ತಿದ್ದಾರೆ.

siddaramaiah express his disappointment on cauvery issue

ಬೆಂಗಳೂರು(ಅ.02): ಡ್ಯಾಮ್ ಕಟ್ಟಿದೋರು ನಾವು. ಆದರೆ, ನಮ್ಮನ್ನ ಕಾವೇರಿ ವಿಚಾರದಲ್ಲಿ ವಿಲನ್ ಥರಾ ನೋಡುತ್ತಿದ್ದಾರೆ. ಕೆಆರ್​​​​​ಎಸ್​​ ಕಟ್ಟಲು ಕೇಂದ್ರ ಸರ್ಕಾರ ನಯಾಪೈಸೆ ನೀಡಿಲ್ಲ. ಆದರೆ, ನಾವೇ ಬಲಿಪಶುಗಳಾಗುತ್ತಿ ದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕಾವೇರಿ ವಿಚಾರದಲ್ಲಿ ವಿಲನ್ ಆಗಿದ್ದೇವೆ, ನಮ್ಮ ಸಂಕಷ್ಟ ಮಾತ್ರ ಕೋರ್ಟ್​​ಗೆ ಅರ್ಥವಾಗ್ತಿಲ್ಲ. ನೀರು ಬಿಡಲೇಬೇಕು ಎಂದು ಸುಪ್ರೀಂಕೋರ್ಟ್ ಹೇಳುತ್ತಿದೆ. ಈಗ ಇರೋದು ಗಾಂಧಿ ತತ್ವದಡಿ ಅಹಿಂಸಾ ಹೋರಾಟ ಎಂದು ಬೆಂಗಳೂರಿನಲ್ಲಿ ಸಿ.ಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇದೇವೇಳೆ, ಸುಪ್ರೀಂಕೋರ್ಟ್ ಮೇಲೆ ನಮಗೆ ನಂಬಿಕೆ ಇದೆ, ಗೌರವವಿದೆ. ಆದರೆ, ಜನಸಾಮಾನ್ಯರ ಬದುಕಿಗಾಗಿ ನೀರು ಬೇಕು ಎಂದಿದ್ದಾರೆ.