ಸಿದ್ಧಗಂಗಾ ಶ್ರೀಗಳ ವಿರುದ್ಧ ಮಾತನಾಡಿದವರು ಸರ್ವನಾಶವಾಗ್ತಾರೆ: ಮಾಜಿ ಸಚಿವೆ ಶೋಭಾ ಕರಂದ್ಲಾಜೆ
ಸಿದ್ದಗಂಗಾ ಶ್ರೀ ಗಳ ವಿರುದ್ದ ಮಾತನಾಡಿದವರು ಸರ್ವನಾಶವಾಗಿ ಹೋಗ್ತಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದರು.
ಬಾಗಲಕೋಟೆ(ಸೆ.14): ಸಿದ್ದಗಂಗಾ ಶ್ರೀ ಗಳ ವಿರುದ್ದ ಮಾತನಾಡಿದವರು ಸರ್ವನಾಶವಾಗಿ ಹೋಗ್ತಾರೆ ಅಂತ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದರು.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು ಶ್ರೀ ಗಳು ಜಾತಿಬೇದ ಮರೆತು ಅಣ್ಣದಾನ, ವಿದ್ಯಾದಾನ ನೀಡುತ್ತಿರೋ ಮಹಾನ್ ವ್ಯಕ್ತಿ. ಅಂತಹ ಮಹಾಪುರುಷರ ಬಗ್ಗೆ ಮಾತನಾಡುವುದು ಸರಿಯಲ್ಲ. ಸಿದ್ದರಾಮಯ್ಯ ನವರ ಚೇಲಾಗಳು ಪ್ರತ್ಯೇಕ ಲಿಂಗಾಯತ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡ್ತಿದ್ದಾರೆ ಅಂತ ಗುಡುಗಿದ್ರು.
ಶ್ರೀಗಳ ಹೆಸರಿಗೆ ಕಳಂಕ ತರುವವರು ಸರ್ವನಾಶ ವಾಗಿ ಹೋಗ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು.