ಕೇಂದ್ರದಲ್ಲಿ ಈಗಾಗಲೇ ಎನ್ ಡಿ ಎ ಅಧಿಕಾರಕ್ಕೆ ಏರಿದೆ. ಆದರೆ ಮೈತ್ರಿ ಪಕ್ಷಗಳಲ್ಲಿ ಮಾತ್ರ ಖಾತೆ ಹಂಚಿಕೆ ಅಸಮಾಧಾನ ವ್ಯಕ್ತವಾಗುತ್ತಿದೆ.

ಮುಂಬೈ: ಎನ್‌ಡಿಎ ಭಾಗವಾಗಿದ್ದ ಜೆಡಿಯು ಅಧಿಕಾರ ಹಂಚಿಕೆಯಲ್ಲಿ ಅಸಮಾಧಾನಗೊಂಡು ಮೈತ್ರಿಯಿಂದ ಹೊರಬಂದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಶಿವಸೇನೆ ಕೂಡ ತನಗೆ ನೀಡಿದ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಪುಟದಲ್ಲಿ 4 ಸಚಿವ ಸ್ಥಾನ ಜೊತೆಗೆ ಪ್ರಮುಖ ಖಾತೆ ಗಳಿಗೆ ಶಿವಸೇನೆ ಬೇಡಿಕೆ ಇಟ್ಟಿತ್ತು. 

ಆದರೆ ಬಿಜೆಪಿ ನಾಯಕರು ಅರವಿಂದ್ ಸಾವಂತ್‌ಗೆ ಮಾತ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ನೀಡಲಾಗಿದೆ. ಸಾವಂತ್ ನೀಡಿದ್ದ ಖಾತೆ ಅಷ್ಟೇನೂ ಮಹತ್ವದದ್ದಲ್ಲ ಎಂದು ಶಿವಸೇನೆ ಸೇನೆ ಒಳಗೊಳಗೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.