ತಮಗೆ ಶಿಷ್ಯನನ್ನು ಸ್ವೀಕರಿಸುವಂತೆ ಒತ್ತಡ ಹೇರುತ್ತಿರುವ ಇತರ ಮಠಾಧೀಶರ ವಿರುದ್ದ, ಮುಂದೆ ಯಾವುದೇ ಬೆಳವಣಿಗೆಯನ್ನು ನಡೆಸದಂತೆ  ನ್ಯಾಯಾಲಯದಿಂದ ಶಿರೂರು ಮಠದ ಶ್ರೀಗಳು ಕೆವಿಯಟ್ ತಂದಿದ್ದಾರೆ.   

ಉಡುಪಿ : ತಮಗೆ ಶಿಷ್ಯನನ್ನು ಸ್ವೀಕರಿಸುವಂತೆ ಒತ್ತಡ ಹೇರುತ್ತಿರುವ ಇತರ ಮಠಾಧೀಶರ ವಿರುದ್ದ, ಯಾವುದೇ ಬೆಳವಣಿಗೆಯನ್ನು ನಡೆಸದಂತೆ ನ್ಯಾಯಾಲಯದಿಂದ ಶಿರೂರು ಮಠದ ಶ್ರೀಲಕ್ಷ್ಮೇವರ ತೀರ್ಥರು ಕೆವಿಯಟ್ ತಂದಿದ್ದಾರೆ.

Add Asianetnews Kannada as a Preferred SourcegooglePreferred

ಶಿರೂರು ಶ್ರೀಗಳು ಸಂನ್ಯಾಸಾಶ್ರಮವನ್ನು ಉಲ್ಲಂಘಿಸಿದ್ದಾರೆ, ಅದ್ದರಿಂದ ಅವರು ಶಿಷ್ಯನನ್ನು ಸ್ವೀಕರಿಸಬೇಕು ಎಂದು ಪೇಜಾವರ ಶ್ರೀ ಮತ್ತು ಇತರ ಮಠಾಧೀಶರಿಂದ ಒತ್ತಡ ಹೇರಿದ್ದರು.

ಇಲ್ಲದಿದ್ದಲ್ಲಿ ಶಿರೂರು ಶ್ರಿಗಳಿಗೆ ಪಟ್ಟದ ದೇವರನ್ನು ನೀಡುವುದಿಲ್ಲ ಎಂಬ ಬೆದರಿಕೆಯನ್ನೂ ಕೂಡ ಒಡ್ಡಿದ್ದರು. ಆದ್ದರಿಂದ ಇದೀಗ ಈ ಎಲ್ಲಾ ಬೆಳವಣಿಗೆಗಳ ವಿರುದ್ಧ ಶಿರೂರು ಶ್ರೀಗಳು ಕೆವಿಯಟ್ ತಂದಿದ್ದಾರೆ.