ಇಂದಿನಿಂದ ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ
ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಜಂಟಿ ಭಾಷಣದಿಂದ ಅಧಿವೇಶನ ಆರಂಭವಾಗುತ್ತದೆ.
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಕೊನೆಯ ಅಧಿವೇಶನ ಫೆ.5ರಿಂದ 28ರವರೆಗೆ ನಡೆಯಲಿದೆ. ಇಂದು ಬೆಳಗ್ಗೆ 11 ಗಂಟೆಗೆ ರಾಜ್ಯಪಾಲರ ಜಂಟಿ ಭಾಷಣದಿಂದ ಅಧಿವೇಶನ ಆರಂಭವಾಗುತ್ತದೆ.
ಫೆ.16ರಂದು ಬಜೆಟ್ ಮಂಡಿಸಲಾಗುತ್ತದೆ. ಕಲಾಪದಲ್ಲಿ ಈ ಬಾರಿ ಗಣಿ ಅಕ್ರಮ, ಅನಂತ್ಹೆಗಡೆ ಹೇಳಿಕೆ, ಅಮಿತ್ ಶಾ ಆರೋಪಗಳು ಪ್ರತಿಧ್ವನಿಸಲಿದೆ.
ಕಾಂಗ್ರೆಸ್ಗೆ ತಿರುಗೇಟು ನೀಡಲು ಬಿಜೆಪಿಯೂ ಸಜ್ಜಾಗಿದೆ. ಈ ಬಾರಿಯ ಅಧಿವೇಶನದಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸಲಾಗುತ್ತದೆ.