ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ. ದಾವಣಗೆರೆಯಲ್ಲಿರೋ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಎಸ್​​ಎಸ್​​  ಹೈಟೆಕ್​​ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡ್ನಿ ಕಳವು ಆರೋಪ ಮಾಡಿ ದಾವಣಗೆರೆ ಮೂಲದ ಮಂಜುನಾಥ ಸ್ವಾಮಿ ಎಂಬುವವರು ಎಸ್​ಎಸ್​​ ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.

ಬೆಂಗಳೂರು(ಅ.13): ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ ಆಸ್ಪತ್ರೆ ವಿರುದ್ದ ಎಸಿಬಿಯಲ್ಲಿ ದೂರು ದಾಖಲಾಗಿದೆ. ದಾವಣಗೆರೆಯಲ್ಲಿರೋ ಶ್ಯಾಮನೂರು ಶಿವಶಂಕರಪ್ಪ ಒಡೆತನದ ಎಸ್​​ಎಸ್​​ ಹೈಟೆಕ್​​ ಆಸ್ಪತ್ರೆಯ ವೈದ್ಯರ ವಿರುದ್ಧ ಕಿಡ್ನಿ ಕಳವು ಆರೋಪ ಮಾಡಿ ದಾವಣಗೆರೆ ಮೂಲದ ಮಂಜುನಾಥ ಸ್ವಾಮಿ ಎಂಬುವವರು ಎಸ್​ಎಸ್​​ ಆಸ್ಪತ್ರೆ ವಿರುದ್ದ ದೂರು ದಾಖಲಿಸಿದ್ದಾರೆ.

ದೂರುದಾರ ಮಂಜುನಾಥ್​​ ಸ್ವಾಮಿ ಎಂಬುವವರು ತನ್ನ 9 ವರ್ಷದ ಮಗ ಚಿರಂತನನ್ನ ಜ್ವರ ಬಂದ ಕಾರಣ 2016 ರಲ್ಲಿ ದಾವಣಗೆರೆಯಲ್ಲಿರೋ ಎಸ್​'ಎಸ್​​ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿದ್ದಾರಂತೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಚಿರಂತನ ಸಾವಪ್ಪಿರುತ್ತಾನೆ . ಆದ್ರೆ ಮರಣೋತ್ತರ ಪರೀಕ್ಷೆಯಾದ ನಂತದ ತನ್ನ ಮಗನ ಆಪರೇಷನ್​​ ಮಾಡಿ ತನ್ನ ಮಗನ ಕಿಡ್ನಿಯನ್ನ ವೈಧ್ಯರು ಕಳವು ಮಾಡಿದ್ದಾರೆ ಎಂದು ಆರೋಪಿಸಿ ಮಂಜುನಾಥ್​​ ಸ್ವಾಮಿ ಪೊಲೀಸ್​ ಠಾಣೆಗೆ ದೂರನ್ನ ನೀಡಿದ್ದಾರೆ.

ಆದರೆ ಪೊಲೀಸ್​​ ಠಾಣೆಯಿಂದ ಸೂಕ್ತ ನ್ಯಾಯ ಸಿಗದ ಕಾರಣ ಮಂಜುನಾಥ್​​ ಎಸಿಬಿ ಮೆಟ್ಟಿಲೇರಿದ್ದಾರೆ.