ದೆಹಲಿಯಲ್ಲಿದ್ದು ಕಾಂಗ್ರೆಸ್ ಮತ್ತು ದೋಸ್ತಿ ಗೊಂದಲಕ್ಕೆ ಕಾರಣ ಪತ್ತೆ ಮಾಡಿದ ಮುನಿಯಪ್ಪ
ರಾಜ್ಯದ ದೋಸ್ತಿ ಸರಕಾರದ ಗೊಂದಲಕ್ಕೆ ಕಾರಣ ಏನು ಎಂಬುದನ್ನು ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ ಕಂಡು ಹಿಡಿದಿದ್ದಾರೆ. ನವದೆಹಲಿಯಲ್ಲಿ ಕುಳಿತು ಕರ್ನಾಟಕ ಸರಕಾರದ ಗೊಂದಲಗಳಿಗೆ ಕಾರಣ ಪತ್ತೆ ಹಚ್ಚಿದ್ದಾರೆ.
ನವದೆಹಲಿ [ಜು. 04] ರಾಜ್ಯ ಸರಕಾರ ಸಂದಿಗ್ಧ ಪರಿಸ್ಥಿತಿಯಲ್ಲಿ ಇದೆ. ಕಾಂಗ್ರೆಸ್ ನಲ್ಲಿ ಕೆಲ ಮುಖಂಡರಿಗೆ ಪ್ರಾಧಾನ್ಯತೆ ಕೊಡದೆ ಇರುವುದು ಕಾಂಗ್ರೆಸ್ ಗೆ ಹಿನ್ನಡೆ ಆಗಿದೆ. ಎರಡನೇ ಹಂತದ ನಾಯಕರನ್ನು ಬೆಳಸದೆ ಇರುವುದೂ ಕಾಂಗ್ರೆಸ್ ಹಿಂದೆ ಬೀಳಲು ಕಾರಣವಾಯಿತು ಎಂದು ಕಾಂಗ್ರೆಸ್ ಹಿರಿಯ ನಾಯಕ ನಾಯಕ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.
ನನ್ನ ಸೋಲಿಗೆ ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರೇ ಕಾರಣ ಈ ಬಗ್ಗೆ ಹೈಕಮಾಂಡ್ ಗೆ ದೂರು ನೀಡಿದ್ದೇನೆ ಎಂದು ಉಗ್ರಪ್ಪ ತಿಳಿಸಿದ್ದಾರೆ.
ಮಂತ್ರಿ ಮಂಡಲ ರಚನೆ ಸಂದರ್ಭದಲ್ಲಿ ಏಕ ಮಾನದಂಡ ವನ್ನು ಅನುಸರಿಸಿಲ್ಲ. ರೋಶನ್ ಬೇಗ್, ಎಚ್ .ಕೆ.ಪಾಟೀಲ್, ರಾಮಲಿಂಗಾ ರೆಡ್ಡಿ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟು ಬೇರೆಯವರನ್ನು ಮಂತ್ರಿ ಮಾಡಲಾಗಿದೆ. ಇದೇ ಗೊಂದಲಕ್ಕೆ ಕಾರಣ ಎಂದು ಮುನಿಯಪ್ಪಹೇಳಿದ್ದಾರೆ.