ಕಪ್ಪುಹಣದ ವಿರುದ್ಧ ಸಮರ ನಡೆಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸುತ್ತಾ, ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಶೇಖರಣೆಯಾಗಿರುವ ಹಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಣವನ್ನು ಮತ್ತೆಚಲಾವಣೆಗೆ ಬಿಡಲಾಗುತ್ತದೆ. ನೀವಿದನ್ನು 'ಸರ್ಜಿಕಲ್ ಆ್ಯಕ್ಷನ್' ಎಂದು ಕರೆಯಬಹುದು ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ಹೇಳಿದ್ದಾರೆ.

ನವದೆಹಲಿ (ಡಿ.15): ಕಪ್ಪುಹಣದ ವಿರುದ್ಧ ಸಮರ ನಡೆಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸುತ್ತಾ, ಜಾರಿ ನಿರ್ದೇಶನಾಲಯವು ಅಕ್ರಮವಾಗಿ ಶೇಖರಣೆಯಾಗಿರುವ ಹಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಹಣವನ್ನು ಮತ್ತೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಲಾವಣೆಗೆ ಬಿಡಲಾಗುತ್ತದೆ. ನೀವಿದನ್ನು 'ಸರ್ಜಿಕಲ್ ಆ್ಯಕ್ಷನ್' ಎಂದು ಕರೆಯಬಹುದು ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ಹೇಳಿದ್ದಾರೆ.

ಮಾರುಕಟ್ಟೆಯಲ್ಲಿರುವ ನಕಲಿ ನೋಟುಗಳ ಬಗ್ಗೆ ಮಾತನಾಡುತ್ತಾ, ಹೊಸ 500 ಹಾಗೂ 2000 ದ ನೋಟುಗಳನ್ನು ನಕಲಿ ಮಾಡುವ ಸಾಧ್ಯತೆ ಕಡಿಮೆ. ಭದ್ರತಾ ಹಿತದೃಷ್ಟಿಯಿಟ್ಟುಕೊಂಡು ಮೊದಲ ಬಾರಿಗೆ ದೇಶಿಯವಾಗಿ ನೋಟುಗಳಿಗೆ ವಿನ್ಯಾಸ

ಮಾಡಲಾಗಿದೆ. ನೋಟುಗಳು ಹೆಚ್ಚು ಭದ್ರವಾಗಿದ್ದು ನಕಲಿ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಪ್ರಸ್ತುತ 500 ರ ಹೊಸ ನೋಟುಗಳನ್ನು ಮುದ್ರಿಸುವುದಕ್ಕೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ದಾಸ್ ಹೇಳಿದ್ದಾರೆ.