Asianet Suvarna News Asianet Suvarna News

ಸರ್ಜಿಕಲ್ ದಾಳಿ: ಕೇಜ್ರಿವಾಲ್, ಚಿದಂಬರಂ, ನಿರುಪಮ್ ವಿರುದ್ಧ ದೇಶದ್ರೋಹ ಪ್ರಕರಣ

Sedition Case Filed Against Kejriwal Chidambaram Over Surgical Strikes

ಮುಝಫ್ಫರಪುರ, ಬಿಹಾರ (ಅ.06): ಮಾಜಿ ಕೇಂದ್ರ ಗೃಹಮಂತ್ರಿ ಪಿ. ಚಿದಂಬರಂ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹಾಗೂ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ವಿರುದ್ಧ ಬಿಹಾರದ ಮುಝಫ್ಫರಪುರದ ನ್ಯಾಯಾಲಯದಲ್ಲಿ ದೆಶದ್ರೋಹ ಪ್ರಕರಣ ದಾಖಲಿಸಲಾಗಿದೆ.

ಭಾರತೀಯ ಸೇನೆ ನಡೆಸಿರುವ ಸರ್ಜಿಕಲ್ ದಾಳಿಗೆ ಸರ್ಕಾರ ಪುರಾವೆ ಒದಗಿಸಬೇಕೆಂದು ಈ ಮೂವರು ಆಗ್ರಹಿಸಿರುವ ಹಿನ್ನೆಲೆಯಲ್ಲಿ ಜಗನ್ನಾಥ ಶಾ ಎಂಬವರು ಚೀಫ್ ಜ್ಯುಡಿಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ.

ಅ.19ರಂದು ನ್ಯಾಯಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ನಡೆಸಲಿದೆ.

Latest Videos
Follow Us:
Download App:
  • android
  • ios