Asianet Suvarna News Asianet Suvarna News

ಮತ್ತೆ ಅಯ್ಯಪ್ಪನ ಸನ್ನಿಧಾನದಲ್ಲಿ ನಿಷೇಧಾಜ್ಞೆ ಜಾರಿ

ನಿತ್ಯ ಪೂಜೆಯ ನಿಟ್ಟಿನಲ್ಲಿ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಮತ್ತೊಮ್ಮೆ ಗಲಭೆ ನಡೆಯುವ ಸಾಧ್ಯತೆ ನಡೆಯಬಹುದಾದ ನಿಟ್ಟಿನಲ್ಲಿ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. 

Section 144 imposed as Kerala readies for Sabarimala reopening on November 5
Author
Bengaluru, First Published Nov 3, 2018, 2:30 PM IST

ಶಬರಿಮಲೆ : ಇನ್ನೆರಡು ದಿನಗಳಲ್ಲಿ ಶಬರಿಮಲೆ ದೇಗುಲವನ್ನು ಪೂಜಾ ಕಾರ್ಯಕ್ಕೆ ತೆರೆಯಲಿದ್ದು ಈ ನಿಟ್ಟಿನಲ್ಲಿ ಸೂಕ್ತ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗುತ್ತಿದೆ.  ಸುಮಾರು 50 ಕಿ.ಮೀ ದೂರದವರೆಗೂ ಕೂಡ ಕಟ್ಟೆಚ್ಚರ ವಹಿಸಲಾಗುತ್ತಿದೆ. 

ನವೆಂಬರ್ 5 ರಂದು ದಿನದ ಪೂಜೆ ಹಿನ್ನೆಲೆಯಲ್ಲಿ ದೇವಾಲಯದ ಬಾಗಿಲನ್ನು ತೆರೆಯಲಾಗುತ್ತಿದೆ.  ಜಿಲ್ಲಾಡಳಿತದಿಂದ ನೆಲವುಂಗಲ್, ಪಂಪಾ, ನಿಲಕ್ಕಲ್, ಸನ್ನಿದಾನಮ್ ಪ್ರದೇಶದ ಬಳಿ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಸ್ಥಳದಲ್ಲಿ ಶಾಂತಿ ಸುವ್ಯವಸ್ಥೆ, ಭದ್ರತೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಅಲ್ಲದೇ ಈ ಸ್ಥಳದಲ್ಲಿ ವಿಶೆಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ. 

ಕಳೆದ ಅಕ್ಟೋಬರ್ 17ರಂದು ದೇವಾಲಯವನ್ನು ನಿತ್ಯದ ಪೂಜೆ ಹಿನ್ನೆಲೆಯಲ್ಲಿ ತೆರೆದಿದ್ದ ಸಾಕಷ್ಟು ಪ್ರಮಾಣದಲ್ಲಿ ಗಲಭೆಗಳು ನಡೆದಿದ್ದವು. ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ್ದು, ಪ್ರತಿಭಟನೆಯನ್ನು ನಡೆಸಲಾಗಿತ್ತು. 

Follow Us:
Download App:
  • android
  • ios