ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯರವರ ಸಾಲವನ್ನು ಎಸ್ ಬಿಐ ಮನ್ನಾ ಮಾಡಿದೆ ಎನ್ನುವ ಮಾಧ್ಯಮ ವರದಿಯನ್ನು ಎಸ್ ಬಿಐ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ ನಿರಾಕರಿಸಿದ್ದಾರೆ.
ನವದೆಹಲಿ (ನ.18): ಉದ್ದೇಶಪೂರ್ವಕ ಸುಸ್ತಿದಾರ ವಿಜಯ್ ಮಲ್ಯರವರ ಸಾಲವನ್ನು ಎಸ್ ಬಿಐ ಮನ್ನಾ ಮಾಡಿದೆ ಎನ್ನುವ ಮಾಧ್ಯಮ ವರದಿಯನ್ನು ಎಸ್ ಬಿಐ ವ್ಯವಸ್ಥಾಪಕ ನಿರ್ದೇಶಕಿ ಅರುಂಧತಿ ಭಟ್ಟಾಚಾರ್ಯ ನಿರಾಕರಿಸಿದ್ದಾರೆ.
“ನಮ್ಮ ಬ್ಯಾಂಕಿನ ಗೌರವಕ್ಕೆ ಕಳಂಚ ತರಲು ಮಾಧ್ಯಮದವರು ಈ ರೀತಿ ಆರೋಪ ಮಾಡಿದ್ದಾರೆ" ಎಂದಿದ್ದಾರೆ.
ಬಾಕಿಯಿರುವ ಸುಸ್ತಿದಾರ ಸಂಗ್ರಹ ಖಾತೆಗೆ ಇವರ ಖಾತೆಯನ್ನು ಸೇರಿಸುವುದರಿಂದ ಲೆಕ್ಕಾಚಾರಗಳ ಬಗ್ಗೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗುತ್ತದೆ. ಎಸ್ ಬಿಐ ಮಲ್ಯರವರಿಂದ ಹಣವನ್ನು ವಸೂಲು ಮಾಡುತ್ತದೆ. ಆದರೆ
ಸಮಯಾವಕಾಶ ಹಿಡಿಯಬಹುದು ಎಂದು ಅರುಂಧತಿ ಭಟ್ಟಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.
