ಯಾದಗಿರಿಯಲ್ಲಿ ಎಸ್'ಬಿಐ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ
ಇವರದು ಅಂತರ್ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು
ಯಾದಗಿರಿ(ಫೆ.04): ನಗರದ ಸ್ಟೇಷನ್ ರಸ್ತೆಯಲ್ಲಿನ ಎಸ್'ಬಿಐ ಬ್ಯಾಂಕ್'ನ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುಳಾ ರಾಠೋಡ್(30) ಮೃತರು. ನಾಗರಾಜ್ ಮಠಪತಿ(35) ಎಂಬುವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇವರದು ಅಂತರ್ ಜಾತಿ ವಿವಾಹವಾದ ಕಾರಣ ಇಬ್ಬರ ಮನೆಯಲ್ಲಿ ಕಿರುಕುಳ ಆರೋಪವಿತ್ತು. ಯಾದಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ದಾಖಲೆಯಿಲ್ಲದ ಲಕ್ಷಾಂತರ ರೂ. ಹಣ, ಆಭರಣ ಜಫ್ತಿ
ಪಟ್ಣಣದಲ್ಲಿ ದಾಖಲೆಯಿಲ್ಲದ ಲಕ್ಷಾಂತರ ರೂ. ಹಣವನ್ನು ವಶಪಡಿಸಿಕೊಂಡು ಒಬ್ಬರನ್ನು ಬಂಧಿಸಲಾಗಿದೆ. 12 ಲಕ್ಷ ಮೌಲ್ಯದ ಚಿನ್ನ, 1.84 ಲಕ್ಷ ನಗದು, ಸ್ಕಾರ್ಪಿಯೋ ವಶಪಡಿಸಿಕೊಳ್ಳಲಾಗಿದೆ. ಬಂಧಿತ ಬೆಳಗಾವಿ ಜಿಲ್ಲೆ ಗೋಕಾಕ್ ನಿವಾಸಿ ಸುರೇಶ್. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.