ಬಾಲಾಕೋಟ್ ದಾಳಿ ಸಾಕ್ಷಿ ಕೇಳಿ ಬೈಸಿಕೊಂಡ ಸ್ಯಾಮ್ ಪಿತ್ರೋಡಾ| ಸರ್ಕಾರ ಬಾಲಾಕೋಟ್ ದಾಳಿಯ ಸಾಕ್ಷ್ಯ ನೀಡಲಿ ಎಂದಿದ್ದ ಸ್ಯಾಮ್| ಸ್ಯಾಮ್ ಪಿತ್ರೋಡಾ ಹೇಳಿಕೆ ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ| ಮುಂಬೈ ದಾಳಿ ಪ್ರಸ್ತಾಪಿಸಿ ಪಾಕಿಸ್ತಾನ ಪ್ರೀತಿ ಹೊರಹಾಕಿದ್ದ ಸ್ಯಾಮ್ ಪಿತ್ರೋಡಾ|

ನವದೆಹಲಿ(ಮಾ.22): ಬಾಲಾಕೋಟ್ ಸಾಕ್ಷಿ ಕೇಳಿ ವಿವಾದ ಸೃಷ್ಟಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ತಮ್ಮ ಪಾಕಿಸ್ತಾನ ಪ್ರೀತಿಯನ್ನೂ ಹೊರ ಹಾಕಿದ್ದಾರೆ .

Add Asianetnews Kannada as a Preferred SourcegooglePreferred

ಬಾಲಾಕೋಟ್ ದಾಳಿಯ ಕುರಿತು ಕೇಂದ್ರ ಸರ್ಕಾರ ಇನ್ನಷ್ಟು ಸಾಕ್ಷ್ಯ ಕೊಡಬೇಕು ಎಂದು ಸ್ಯಾಮ್ ಕೇಳಿದ್ದರು. ಈ ವೇಳೆ ಮುಂಬೈ ದಾಳಿ ಪ್ರಸ್ತಾಪಿಸಿದ್ದ ಸ್ಯಾಮ್, 8 ಜನ ಸೇರಿ ಮಾಡಿದ ಕೃತ್ಯಕ್ಕೆ ಇಡೀ ದೇಶವನ್ನು ಹೇಗೆ ಹೊಣೆ ಮಾಡಲು ಸಾಧ್ಯ ಎಂದು ಪರೋಕ್ಷವಾಗಿ ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ.

Scroll to load tweet…

ಯಾರೋ ತಲೆ ಕೆಟ್ಟವರಿಂದ ನಡೆದ ದುಷ್ಕೃತ್ಯಕ್ಕೆ ಇಡೀ ದೇಶವನ್ನು ಮತ್ತು ಅಲ್ಲಿನ ಜನರನ್ನು ದೂಷಿಸುವುದು ಎಷ್ಟು ಸರಿ ಎಂದಿರುವ ಸ್ಯಾಮ್, ಈ ರೀತಿಯ ರಾಜಕಾರಣ ಮಾಡುವುದು ಬಿಜೆಪಿ ಮಾತ್ರ ಎಂದು ಹಂಗಿಸಿದ್ದಾರೆ.