ಸೌಹಾರ್ದತೆಯ ಇತಿಹಾಸ ಬರೆಯಲಿದೆ ಆರ್‌ಎಸ್‌ಎಸ್‌ಆರ್‌ಎಸ್‌ಎಸ್‌ನಿಂದ ಅಯೋಧ್ಯೆಯಲ್ಲಿ ನಮಾಜ್‌, ಕುರಾನ್ ಪಠಣಸರಯೂ ನದಿ ದಂಡೆಯಲ್ಲಿ ಸಾಮೂಹಿಕ ನಮಾಜ್1,500 ಉಲೇಮಾಗಳಿಂದ ಕುರಾನ್ ಪಠಣ 

ನವದೆಹಲಿ(ಜು.11): ಅಯೋಧ್ಯೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗು ಇಸ್ಲಾಂ ಪವಿತ್ರ ಗ್ರಂಥ ಕುರಾನ್ ಪಠಣ ಕಾರ್ಯಕ್ರಮ ನಡೆಯಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್‌) ಹಾಗೂ ಅದರ ಮುಸ್ಲಿಮ್ ವಿಭಾಗವಾದ ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಲಿದೆ. ಈ ಬೃಹತ್ ಪ್ರಾರ್ಥನೆ, ಕುರಾನ್ ಪಠಣ ಕಾರ್ಯಕ್ರಮವು ಇದೇ ಜುಲೈ 12 ರಂದು ನಡೆಯಲಿದೆ.

ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಮುಸ್ಲಿಮ್ ಉಲೇಮಾಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರಯೂ ನದಿ ದಂಡೆಯ ರಾಮ್ ಕಿ ಪೈದಿ ಘಾಟ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸೂಫಿ ಸಂತರ ಸಮಾಧಿಗಳಿಗೂ ಅವರು ತೆರಳಲಿದ್ದಾರೆ. ಉಲೇಮಾಗಳು ಮೊದಲಿಗೆ ನಮಾಜ್ ನೆರವೇರಿಸಿ ಬಳಿಕ ಪವಿತ್ರ ಕುರಾನ್ ಶ್ಲೋಕಗಳನ್ನು 5 ಲಕ್ಷ ಬಾರಿ ಪಠಿಸುವರು ಎನ್ನಲಾಗಿದೆ

ಈ ಕಾರ್ಯಕ್ರಮವು ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಿದೆ. ಹಾಗೆಯೇ ಆರ್‌ಎಸ್‌ಎಸ್‌ ತಾನು ಮುಸ್ಲಿಂ ವಿರೋಧಿ ಎನ್ನುವ ಹಣೆಪಟ್ಟಿಯಿಂದ ಹೊರಬರಲು ಸಹಕಾರಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.