Asianet Suvarna News Asianet Suvarna News

ಪಿನರಾಯಿ ತಲೆ ತಂದು ಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್'ಎಸ್ಎಸ್ ಮುಖಂಡರಿಂದ ವಿವಾದಾತ್ಮಕ ಹೇಳಿಕೆ

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್ ಎಸ್ ಎಸ್ ಮುಖಂಡರೊಬ್ಬರು ವಿವಾದ ಸೃಷ್ಟಿ ಮಾಡಿದ್ದಾರೆ.  

RSS leader announces Rs 1 crore bounty on Kerala CM Pinarayi Vijayan  head

ನವದೆಹಲಿ (ಮಾ.02): ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಗೆ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೊಣೆಯಾಗಿದ್ದು ಅವರ ತಲೆ ತಂದುಕೊಟ್ಟವರಿಗೆ 1 ಕೋಟಿ ಕೊಡುವುದಾಗಿ ಆರ್ ಎಸ್ ಎಸ್ ಮುಖಂಡರೊಬ್ಬರು ವಿವಾದ ಸೃಷ್ಟಿ ಮಾಡಿದ್ದಾರೆ.  

ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ಹಿಂದಿರುವ ಕೇರಳ ಸಿಎಂ ವಿಜಯನ್ ರವರ ತಲೆಯನ್ನು ತಂದುಕೊಟ್ಟವರಿಗೆ 1 ಕೋಟಿ ಕೊಡುತ್ತೇನೆ ಎಂದು ಉಜ್ಜಯಿನಿಯ ಸಾ ಪ್ರಚಾರ್ ಪ್ರಮುಖ್ ಕುಂದನ್ ಚಂದ್ರಾವತ್ ಎನ್ನುವ ಆರ್ ಎಸ್ ಎಸ್ ಮುಖಂಡರೊಬ್ಬರು ಹೇಳಿದ್ದಾರೆ.

300 ಮಂದಿ ಪ್ರಚಾರಕರನ್ನು ಕೊಲ್ಲಲಾಗಿದೆ. ನಾವು 3 ಲಕ್ಷ ತಲೆಗಳ ಹಾರವನ್ನು  ಭಾರತ ಮಾತೆಗೆ ಹಾಕುವುದಾಗಿ ಆಫರ್ ಮಾಡುತ್ತಿದ್ದೆವೆಂದು ಕಮ್ಯುನಿಸ್ಟರಿಗೆ ಎಚ್ಚರಿಕೆ ನೀಡಿದರು.

ಇದು ಚಂದ್ರಾವತ್ ರವರ ವೈಯಕ್ತಿಕ ಅಭಿಪ್ರಾಯವೇ ಹೊರತು ನಮ್ಮ ಅಭಿಪ್ರಾಯವಲ್ಲ ಎಂದು ಆರ್ ಎಸ್ ಎಸ್ ಹೇಳಿದೆ.

 

Latest Videos
Follow Us:
Download App:
  • android
  • ios