ದೇಶ ವಿರೋಧಿ ಶಕ್ತಿಗಳಿಂದ ಶಾಂತಿ ಕದಡುವ ಯತ್ನ: ಭಾಗವತ್!
‘ದೇಶ ವಿರೋಧಿ ಶಕ್ತಿಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ’| ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿಡಿ| ಕಾನ್ಪುರದಲ್ಲಿ ಗಣರಾಜ್ಯೋತ್ಸವ ಭಾಷಣ ಮಾಡಿದ ಭಾಗವತ್| ಭಾರತದ ವಿಶ್ವಗುರುವಾಗಲು ಎಲ್ಲರೂ ಶ್ರಮಿಸಬೇಕು ಎಂದ ಭಾಗವತ್
ಕಾನ್ಪುರ(ಜ.27): ದೇಶ ವಿರೋಧಿ ಶಕ್ತಿಗಳು ರಾಷ್ಟ್ರದ ಶಾಂತಿ ಹಾಳು ಮಾಡುತ್ತಿವೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ಕಾನ್ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ದೇಶದ ಪ್ರಗತಿ ಬಯಸದ ಈ ದುಷ್ಟ ಶಕ್ತಿಗಳು ಸಮಾಜದಲ್ಲಿ ಶಾಂತಿ ಕದಡುವ ಮೂಲಕ ತಮ್ಮ ಲಾಭ ಮಾಡಿಕೊಳ್ಳುತ್ತಿವೆ ಎಂದು ಹರಿಹಾಯ್ದರು.
ಯಾರ ವಿನಾಶವನ್ನೂ ನಾವು ಬಯಸುವುದಿಲ್ಲ, ಎಲ್ಲರೂ ಸಂತೋಷವಾಗಿರಬೇಕು ಎಂಬುದೇ ಸಂಘದ ಆಶಯ ಎಂದು ಭಾಗವತ್ ಈ ವೇಳೆ ಹೇಳಿದರು.
Mohan Bhagwat, RSS: 70 saal hue, hum aage badh rahe hain. Lekin dunia mein shanti uttpan hui to jinke swarth ke dukaan band honge, aise log prayaas kar rahe hain ki desh samriddh na ho. Iss prakar ke prayas karne wali shaktian dunia mein hain, apne desh mein bhi hain. (26.01.19) pic.twitter.com/CHVW0JKKB8
— ANI (@ANI) January 27, 2019
ಆದರೆ ದೇಶ ವಿರೋಧಿ ಶಕ್ತಿಗಳು ಶಾಂತಿ ನಾಶ ಮಾಡಲು ಪ್ರಯತ್ನಿಸುತ್ತಿದ್ದು, ಅವರ ಉದ್ದೇಶ ಎಂದೂ ಈಡೇರುವುದಿಲ್ಲ ಎಂದು ಭಾಗವತ್ ಭರವಸೆ ನೀಡಿದರು.
ಭಾರತ ವಿಶ್ವಗುರುವಾಗುವತ್ತ ಹೆಜ್ಜೆ ಇರಿಸಿದ್ದು, ಪ್ರತಿಯೊಬ್ಬ ಭಾರತೀಯ ಈ ಕಾರ್ಯ ಸಾಧನೆಗೆ ನೆರವಾಗಬೇಕು ಎಂದು ಭಾಗವತ್ ಕರೆ ನೀಡಿದರು.