ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ತಿಹಾರ್ ಜೈಲು ಸೇರಿರುವ ನಡುವೆಯೇ, ಮಹಾರಾಷ್ಟ್ರದ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 25,000 ಕೋಟಿ ರು. ಅಕ್ರಮ ವ್ಯವಹಾರ ಪ್ರಕರಣದಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ಕೇಸು ದಾಖಲಿಸಿದೆ.

ನವದೆಹಲಿ (ಸೆ. 25): ಅಕ್ರಮ ಹಣ ವರ್ಗಾವಣೆ ಕೇಸಲ್ಲಿ ಕಾಂಗ್ರೆಸ್‌ನ ಇಬ್ಬರು ಹಿರಿಯ ನಾಯಕರು ತಿಹಾರ್ ಜೈಲು ಸೇರಿರುವ ನಡುವೆಯೇ, ಮಹಾರಾಷ್ಟ್ರದ ಸಹಕಾರಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ 25, 000ಕೋಟಿ ರು. ಅಕ್ರಮ ವ್ಯವಹಾರ ಪ್ರಕರಣದಲ್ಲಿ ಎನ್ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯ ಮಂಗಳವಾರ ಕೇಸು ದಾಖಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂಜಾಬ್‌ಗೆ ಡ್ರೋನ್ ಮೂಲಕ ಪಾಕ್‌ನಿಂದ ಶಸ್ತ್ರಾಸ್ತ್ರ ಪೂರೈಕೆ!

ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ನಡೆದ 25 ಸಾವಿರ ಕೋಟಿ ಹಗರಣ ಸಂಬಂಧ ಶದರ್ ಪವಾರ್ ಹಾಗೂ ಅಳಿಯ ಅಜಿತ್ ಪವಾರ್ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಎಫ್ ಐಆರ್ ದಾಖಲಿಸಿದೆ. ಪ್ರಕರಣ ಸಂಬಂಧ ಬ್ಯಾಂಕಿನ 70 ಪದಾಧಿಕಾರಿಗಳ ಹೆಸರನ್ನು ಎಫ್‌ಆಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಜೈಲಿನಲ್ಲಿರುವ ಚಿದಂಬರಂಗೆ ಮೋದಿಯಿಂದ ಬರ್ಥಡೆ ವಿಶಸ್, ಅದೂ ತಮಿಳಿನಲ್ಲಿ!

2007- 17 ರ ಅವಧಿಯಲ್ಲಿ ಅಜಿತ್ ಪವಾರ್ ಬ್ಯಾಂಕ್‌ನ ನಿರ್ದೇಶಕರಾಗಿದ್ದ ವೇಳೆ, ಆರ್‌ಬಿಐ ನೀತಿಗಳನ್ನು ಉಲ್ಲಂಘಿಸಿ ಉದ್ದೇಪೂರ್ವಕವಾಗಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿದ್ದರಿಂದ ಬ್ಯಾಂಕ್‌ಗೆ 25 ಸಾವಿರ ಕೋಟಿ ನಷ್ಟ ಉಂಟಾಗಿತ್ತು. ಪ್ರಕರಣವನ್ನು ರಾಜ್ಯ ಸರ್ಕಾರ 2017 ರಲ್ಲಿ ಎಸ್‌ಐಟಿಗೆ ವಹಿಸಿತ್ತು. ಮುಂದಿನ ತಿಂಗಳು ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಅಧಿಸೂಚನೆ ಹೊರಬಿದ್ದು ಪ್ರಚಾರ ಕಾರ್ಯಗಳು ನಡೆಯುತ್ತಿವೆ. ಇದೇ ವೇಳೆ ಪವಾರ್ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಚುನಾವಣೆ ವೇಳೆ ಹಿನ್ನಡೆಯಾಗುವ ಸಾಧ್ಯತೆ ಇದೆ.