ಗನ್ ಹಿಡಿದು ರೌಡಿಯ ಪುಂಡಾಟ| ಸಿಎಂ ಸ್ವ ಕ್ಷೇತ್ರ ರಾಮನಗರ ಹೆದ್ದಾರಿಯಲ್ಲಿ ಪುಡಿ ರೌಡಿ ಅಟ್ಟಹಾಸ| ಸಿನಿಮೀಯ ರೀತಿಯ ದೃಶ್ಯ ಕ್ಯಾಮರಾದಲ್ಲಿ ಸೆರೆ| ಸಾರ್ವಜನಿಕವಾಗಿ ಗನ್ ಪ್ರದರ್ಶಿಸಿದ್ದಕ್ಕೆ ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲು
ಬೆಂಗಳೂರು[ಮಾ.07]: ಸಿಎಂ ಸ್ವಕ್ಷೇತ್ರ ರಾಮನಗರದಲ್ಲಿ ಪುಂಡರ ಆಟ ಹೆಚ್ಚಾಗಿದೆ. ಶಿವರಾತ್ರಿ ಹಬ್ಬದ ದಿನದಂದು ಹಾಡಹಗಲೇ ಕಾರಿನಲ್ಲಿ ಗನ್ ಹಿಡಿದು ನಡುರಸ್ತೆಯಲ್ಲೇ ರಾಜಾ ರೋಷವಾಗಿ ಕಾರಿನಲ್ಲಿ ಓಡಾಡುತ್ತಿದ್ದಾರೆ.
KA 02 Z 7031 ನಂಬರ್ನ ಕಾರಿನಲ್ಲಿ ಗನ್ ಹಿಡಿದು ಕುಳಿತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಗನ್ ಹಿಡಿದು ದಾರಿಯುದ್ದಕ್ಕೂ ಜನರನ್ನು ಹೆದರಿಸಿದ್ದಾನೆ. ಇನ್ನು ಈಗಾಗಲೇ ಸಿನೀಮಿಯ ರೀತಿಯ ಈ ಬೆದರಿಕೆಗೆ ಜನರು ಆತಂಕಗೊಂಡಿದ್ದಾರೆ.
ಸಿಎಂ ಕ್ಷೇತ್ರದಲ್ಲೇ ಈ ರೀತಿ ಪುಂಡರ ಆಟ ಹೆಚ್ಚಾಗಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗನ್ ಪ್ರದರ್ಶಿಸಿದ್ದಕ್ಕೆ ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಪ್ರಕಾರ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಬೇಕಿದೆ. ಆದರೆ ಈವರೆಗೂ ಪೊಲೀಸರು ಆತ ಯಾರು ಎಂಬುದನ್ನು ಇನ್ನೂ ಕೂಡಾ ಕಂಡು ಹಿಡಿದಿಲ್ಲ.
"
ಸುವರ್ಣ ನ್ಯೂಸ್ ಈಗಾಗಲೇ ಪೊಲೀಸರಿಗೆ ಸಾಕ್ಷಿ ಕೊಟ್ಟಿದ್ದು, ಕ್ರಮ ಯಾವಾಗ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 9:53 AM IST